ಸೋಂಕಿತರ ಪ್ರಾಣಕ್ಕೆ ಕಂಟಕ – ರಾಜ್ಯದಲ್ಲೂ ನಿಷೇಧ ಆಗುತ್ತಾ ಪಟಾಕಿ?

Public TV
1 Min Read

ಬೆಂಗಳೂರು: ದೀಪಾವಳಿಗೆ ರಾಜ್ಯದಲ್ಲೂ ಪಟಾಕಿ ನಿಷೇಧ ಆಗುತ್ತಾ ಎಂಬ ಪ್ರಶ್ನೆಯೊಂದು ಮೂಡಿದ್ದು, ಇಂದು ಆರೋಗ್ಯ ಇಲಾಖೆಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ.

ಕೋವಿಡ್ ಸಲಹಾ ಸಮಿತಿಯಿಂದ ಪಟಾಕಿ ನಿಷೇಧಕ್ಕೆ ಸಲಹೆ ನೀಡುವ ನಿರೀಕ್ಷೆ ಇದೆ. ಈ ಶಿಫಾರಸು ಆಧರಿಸಿ ರಾಜ್ಯದಲ್ಲಿ ಪಟಾಕಿ ನಿಷೇಧವಾಗುವ ಸಾಧ್ಯತೆಗಳಿವೆ. ಪಟಾಕಿ ನಿಷೇಧದ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಸುಳಿವು ನೀಡಿದ್ದಾರೆ. ಪಟಾಕಿ ಸಿಡಿಸುವುದರಿಂದ ಕೋವಿಡ್ ಸೋಂಕಿತರ ಮೇಲೆ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ಸಚಿವರ ಜೊತೆಗಿನ ಸಭೆಯಲ್ಲಿ ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಟಾಕಿ ಹೊಡೆದು ಹೃದಯ ಸಮಸ್ಯೆ ತಂದುಕೊಳ್ಳಬೇಡಿ. ಕೋವಿಡ್ ಸೋಂಕು ನೇರವಾಗಿ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತೆ. ಪಟಾಕಿ ಹೊಡೆದರೆ ವಾಯುಮಾಲಿನ್ಯ ಅಧಿಕಗೊಂಡು ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಸೋಂಕಿತರ ಪ್ರಾಣಕ್ಕೆ ಪಟಾಕಿ ವಾಯುಮಾಲಿನ್ಯವೇ ಕಂಟಕ ಆಗಬಹುದು. ದೀಪ ಬೆಳಗಿ ದೀಪಾವಳಿ ಅಚರಿಸಿ, ಪಟಾಕಿ ಮಾತ್ರ ಹೊಡೀಬೇಡಿ ಎಂದು ಜನರಿಗೆ ತಜ್ಞರು ಸಲಹೆ ನೀಡಿದ್ದಾರೆ.

ದೀಪಾವಳಿ ಸರಳ ಆಚರಣೆಯ ಬಗ್ಗೆ ನಾವು ಚಿಂತನೆ ಮಾಡಬೇಕು. ಜನರ ಜೀವ ಮುಖ್ಯ. ಪಟಾಕಿಯಿಂದ ಕೆಮಿಕಲ್ಸ್ ನಿಂದ ಕೊರೊನಾ ಸೋಂಕಿತರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ವಾಯು ಮಾಲಿನ್ಯದಿಂದ ಹೈರಿಸ್ಕ್ ಕೇಸ್ ಗಳಿಗೆ ಡೇಂಜರ್ ಆಗುತ್ತೆ. ಹೈರಿಸ್ಕ್ ಕೇಸ್ ಗಳ ಬಗ್ಗೆ ನಿಗಾ ಇಡಬೇಕು. ದೀಪಾವಳಿ ಆಚರಣೆಯಿಂದ ಗುಂಪು ಗೂಡುತ್ತಾರೆ ಅದು ಡೇಂಜರ್ ಎಂದು ಅಭಿಪ್ರಾಯಿಸಿದ್ದಾರೆ.

ಏನು ಮಾರ್ಗ ಸೂಚಿಗಳನ್ನ ರೂಪಿಸಬೇಕು?
ದೀಪಾವಳಿ ಸರಳ ಆಚರಣೆಗೆ ಅವಕಾಶ ಕೊಡಬೇಕು. ಗುಂಪು ಗೂಡದಂತೆ ವಾರಿಯರ್ಸ್ ನಿಗಾ ವಹಿಸಬೇಕು. ಮಾಸ್ಕ್ ಕಡ್ಡಾಯವಾಗಿ ಮಾಡಲೇಬೇಕು. ಸೊಂಕು ಹೆಚ್ಚಿರುವ ಪ್ರದೇಶದಲ್ಲಿ ಪಟಾಕಿ ಸಂಪೂರ್ಣ ನಿಷೇಧ ಮಾಡಬೇಕು

Share This Article
Leave a Comment

Leave a Reply

Your email address will not be published. Required fields are marked *