ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

Public TV
1 Min Read

ಚಿಕ್ಕಬಳ್ಳಾಪುರ: ಗೃಹಿಣಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ನಗರದ ಪ್ರಭಾಕರ್ ಬಡಾವಣೆಯ ನಳಿನಿ(36) ಮೃತ ಗೃಹಿಣಿ. ಶಿಡ್ಲಘಟ್ಟ ತಾಲೂಕು ದೊಡ್ಡಹಳ್ಳಿ ಗ್ರಾಮದ ಶ್ರೀರಾಮ ಎಂಬಾತನಿಗೆ 16 ವರ್ಷಗಳ ಹಿಂದೆ ನಳಿನಿ ಮದುವೆ ಮಾಡಿಕೊಡಲಾಗಿದೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅಂತ ಚಿಂತಾಮಣಿ ನಗರದಲ್ಲಿ ಬಂದು ನೆಲೆಸಿದ್ರು.

ಪತಿ ಶ್ರೀರಾಮ ಮದುವೆಯಾದಗಿಂದಲೂ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದನಂತೆ. ಹಣ ತರದಿದ್ದಾಗ ಹೊಡೆಯುತ್ತಿದ್ದನು. ಅಲ್ಲದೆ ಪತ್ನಿಯನ್ನು ತವರು ಮನೆಗೆ ಕಳುಹಿಸುತ್ತಿದ್ದನಂತೆ. ಕಳೆದ 15 ದಿನಗಳ ಹಿಂದೆಯೂ ಇದೇ ರೀತಿ ಹಲ್ಲೆ ಮಾಡಿದ ಪರಿಣಾಮ ನಳಿನಿ ತವರು ಮನೆ ಸೇರಿದ್ದಳು.

ಇತ್ತ ತವರು ಮನೆ ಸೇರಿದ ಬಳಿಕ ಅಲ್ಲಿಗೆ ಬಂದಿದ್ದ ಗಂಡ ಇನ್ನು ಮುಂದೆ ಈ ರೀತಿ ಮಾಡೋದಿಲ್ಲ, ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದಾನೆ. ಹೀಗೆ ಪದೆ ಪದೇ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿದ್ದು ಇದ್ರಿಂದ ನೊಂದ ಗೃಹಿಣಿ ತನ್ನ ಹಿರಿ ಮಗಳನ್ನ ಶಾಲೆಗೆ ಕಳುಹಿಸಿ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆ ನಂತರ ಗಂಡ ಪರಾರಿಯಾಗಿದ್ದಾನೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *