ನೆರೆ ಮನೆ ದಂಪತಿಯ ಕೊಂದು ವಿಷ ಕುಡಿದ

Public TV
1 Min Read

-ಚಾಕುವಿನಿಂದ ಚುಚ್ಚಿ ಕೊಲೆ

ನವದೆಹಲಿ: ನೆರೆ ಮನೆಯ ದಂಪತಿಯನ್ನು ಕೊಂದ ವ್ಯಕ್ತಿ ವಿಷ ಕುಡಿದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ.

ಮಂಗಳವಾರ ತಡರಾತ್ರಿ ಉತ್ತರ ದೆಹಲಿಯ ಹೊರವಲಯದ ನರೆಲಾ ಇಲಾಖೆಯಲ್ಲಿ ಕೊಲೆ ನಡೆದಿದೆ. ಮನೆಗೆ ನುಗ್ಗಿದ ಆರೋಪಿ ಮುಸ್ತಾಕ್ ಉದ್ದವಾದ ಹರಿತ ಚಾಕುವಿನಿಂದ ಇರಿದು ದಂಪತಿಯನ್ನು ಕೊಲೆಗೈದಿದ್ದಾನೆ. ತೀವ್ರ ರಕ್ತಸ್ರಾವವಾದ ಹಿನ್ನೆಲೆ ದಂಪತಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಕೊಲೆಯ ಬಳಿಕ ಆರೋಪಿ ವಿಷ ಸೇವಿಸಿದ್ದಾನೆ.

ಘಟನೆ ಕುರಿತು ಮಾಹಿತಿ ನೀಡಿರುವ ಡಿಸಿಪಿ ಗೌರವ್ ಶರ್ಮಾ, ಮಂಗಳವಾರ ರಾತ್ರಿ ಸುಮಾರು 2.40ಕ್ಕೆ ವ್ಯಕ್ತಿಯೋರ್ವ ಮಹಿಳೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂಬ ವಿಷಯ ತಿಳಿಯಿತು. ಘಟನಾ ಸ್ಥಳಕ್ಕೆ ಹೋದಾಗ ಅಲ್ಲಿ ರಕ್ತದ ಮಡುವಿನಲ್ಲಿ ಎರಡು ಶವಗಳು ಸಿಕ್ಕಿವೆ. ಮತ್ತೋರ್ವ ಅಸ್ವಸ್ಥನಾಗಿ ಬಿದ್ದಿದೆ. ಕೂಡಲೇ ಅಸ್ವಸ್ಥನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆರೋಪಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಲ್ಲ ಆಯಾಮಾಗಳಿಂದಲೂ ತನಿಖೆ ನಡೆಸಲಾಗುತ್ತಿದ್ದು, ಆರೋಪಿ ಹಾಗೂ ಮೃತ ದಂಪತಿಯ ಕುಟುಂಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *