ನೀವು ಯಾವ ಪಕ್ಷ ಎಂದ ಚಾಮರಾಜನಗರ ಸಿಇಒಗೆ ಗ್ರಾಮಸ್ಥರಿಂದ ತರಾಟೆ

Public TV
1 Min Read

ಚಾಮರಾಜನಗರ: ಗ್ರಾಮ ಪಂಚಾಯತಿ ಸದಸ್ಯೆಯೊಬ್ಬರನ್ನು ನೀವು ಯಾವ ಪಕ್ಷ ಎಂದು ಕೇಳಿದ ಜಿಲ್ಲಾ ಪಂಚಾಯಿತಿ ಸಿಇಒಗೆ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ನರೇಗಾದಡಿ ಜಲಶಕ್ತಿ ಯೋಜನೆಗಳ ಪರಿಶೀಲನೆಗೆ ಹನೂರು ತಾಲೂಕು ಹೂಗ್ಯಂ ಗ್ರಾಮಕ್ಕೆ ತೆರಳಿದ್ದ ಚಾಮರಾಜನಗರ ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್‍ಗೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಮನವಿ ಸಲ್ಲಿಸಲು ಬಂದಿದ್ದಾರೆ. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯೆಯನ್ನು ಸಿಇಒ ನೀವು ಯಾವ ಪಕ್ಷ ಎಂದು ಕೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ನಾವು ಯಾವ ಪಕ್ಷವಾದರೇನು? ಕೆಲಸ ಮಾಡಲು ಬಂದಿದ್ದೀರಲ್ಲವೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಜೆಪಿಯಾದರೆ ಒಂದು ರೀತಿ, ಕಾಂಗ್ರೆಸ್ ಆದರೆ ಮತ್ತೊಂದು ರೀತಿ ಕೆಲಸ ಮಾಡಿಕೊಡುತ್ತೀರಾ ಎಂದು ಪ್ರಶ್ನಿಸಿದಾಗ ಉತ್ತರಿಸಲಾಗದೆ ಸಿಇಒ ತಬ್ಬಿಬ್ಬಾಗಿದ್ದಾರೆ. ತರಾಟೆಗೆ ತೆಗೆದುಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *