ನೀರು ಕುಡಿಯಲು ಹೋದ ಹಸು ಮೊಸಳೆ ದಾಳಿಗೆ ಬಲಿ

Public TV
1 Min Read

ರಾಯಚೂರು: ತಾಲೂಕಿನ ಡೊಂಗರಾಂಪೂರ ಬಳಿ ಕೃಷ್ಣಾ ನದಿ ದಡದಲ್ಲಿ ಮೊಸಳೆ ದಾಳಿಗೆ ಹಸು ಬಲಿಯಾಗಿರುವ ಘಟನೆ ನಡೆದಿದೆ.

ನೀರು ಕುಡಿಯಲು ಹೋದ ಹಸುವನ್ನು ಎಳೆದೊಯ್ದು ಮೊಸಳೆ ತಿಂದು ಹಾಕಿದೆ. ರೈತ ಆಂಜನೇಯ ಎಂಬವರಿಗೆ ಸೇರಿದ ಹಸು ಮೊಸಳೆ ದಾಳಿಗೆ ಬಲಿಯಾಗಿದೆ. ನದಿ ಪಕ್ಕದಲ್ಲೇ ಜಮೀನು ಇದ್ದಿದ್ದರಿಂದ ರೈತ ಆಂಜನೇಯ ನಿನ್ನೆ ಸಂಜೆ ಹಸುವನ್ನ ನೀರು ಕುಡಿಯಲು ಬಿಟ್ಟಿದ್ದ, ಮೊಸಳೆ ದಾಳಿಗೆ ಹಸು ಬಲಿಯಾಗಿದ್ದು, ಇಂದು ಬೆಳಗ್ಗೆ ನದಿಯಲ್ಲಿ ತೇಲಾಡುತ್ತಿದ್ದಾಗ ರೈತರು ಗಮನಿಸಿದ್ದಾರೆ. ತೆಪ್ಪದ ಮೂಲಕ ಹೋಗಿ ತೇಲಾಡುತ್ತಿದ್ದ ಹಸು ಎಳೆದು ತಂದಿದ್ದಾರೆ. ಹಸುವಿನ ಮೈಮೇಲಿನ ಗಾಯಗಳಿಂದ ಮೊಸಳೆ ದಾಳಿ ಮಾಡಿರುವುದು ಖಚಿತವಾಗಿದೆ.

ಈ ಹಿಂದೆ ಇದೇ ಸ್ಥಳದಲ್ಲಿ ಐದು ವರ್ಷದ ಬಾಲಕನನ್ನ ಮೊಸಳೆ ಎಳೆದುಕೊಂಡು ಹೋಗಿತ್ತು. ಹೀಗಾಗಿ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ ಮೊಸಳೆ ದಾಳಿಗೆ ಹೆದರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ- ಶಿರಸಿಯಲ್ಲಿ ಮತ್ತೆ ಭೂ ಕುಸಿತ

Share This Article
Leave a Comment

Leave a Reply

Your email address will not be published. Required fields are marked *