ನಾಪತ್ತೆಯಾಗಿರುವ ಉಸ್ತುವಾರಿ ಸಚಿವರನ್ನು ಹುಡುಕಿ ಕೊಡಿ ಅಂತಿದ್ದಾರೆ ಯಾದಗಿರಿ ಮಂದಿ

Public TV
1 Min Read

ಯಾದಗಿರಿ: ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡರು ಕೂಡ ಜಿಲ್ಲೆಗೆ ಇನ್ನೂ ಬಾರದ ಉಸ್ತುವಾರಿ ಸಚಿವ ಆರ್ ಶಂಕರ್ ವಿರುದ್ಧ ಜಿಲ್ಲೆಯ ಜನರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಜೂನ್ 28 ರಂದು ತನ್ನ ಇಡೀ ಕುಟುಂಬದೊಂದಿಗೆ ಜಿಲ್ಲೆಯ ಶಹಪುರ ತಾಲೂಕಿನ ದೋರನಹಳ್ಳಿಯಲ್ಲಿ ರೈತ ಭೀಮರಾಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡು 15 ದಿನ ಕಳೆದರು ಜಿಲ್ಲೆಗೆ ಮಾತ್ರ ಸಚಿವ ಆರ್ ಶಂಕರ್ ಇನ್ನೂ ಬಂದಿಲ್ಲ. ಮಾನವೀಯತೆಗಾದ್ರೂ ಕನಿಷ್ಠ ಪಕ್ಷ ಒಂದು ಸಾಂತ್ವನ ಮಾತು ಸಹ ಹೇಳಿಲ್ಲ. ಇಂದು ಜಿಲ್ಲೆಯ ಜನ ಅಸಮಾಧಾನಕ್ಕೆ ಕಾರಣವಾಗಿದೆ.

ಸಾಲಭಾದೆಯಿಂದ ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದರು. ಇತ್ತ ಪೊಲೀಸ್ ಇಲಾಖೆಯಿಂದಲೂ ತನಿಖೆಗೆ ನಿರ್ಲಕ್ಷ್ಯವಾಗುತ್ತಿದೆ. ರೈತನ ಆತ್ಮಹತ್ಯೆಗೆ ಸಾಲಗಾರರ ಬೆದರಿಕೆ ಮುಖ್ಯ ಕಾರಣವಾಗಿದ್ದರು. ಸಾಲಗಾರರ ಬಂಧನವಿರಲಿ, ವಿಚಾರಣೆ ಸಹವಾಗಿಲ್ಲ. ಪೊಲೀಸ್ ಇಲಾಖೆ ಕಾಟಾಚಾರಕ್ಕೆ ತನಿಖೆ ನಡೆಸುತ್ತಿದೆ. ಈ ಕಾರಣಗಳಿಂದ ಆಕ್ರೋಶಗೊಂಡ ಯಾದಗಿರಿ ಜನರು ಯಾದಗಿರಿ ಉಸ್ತುವಾರಿ ಸಚಿವರ ನಾಪತ್ತೆತಾಗಿದ್ದು, ಎಲ್ಲಿದ್ದಿರಿ ಯಾದಗಿರಿ ಉಸ್ತುವಾರಿ ಸಚಿವ ಆರ್ ಶಂಕರ್ ರವರೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಆರು ಮಂದಿ ಆತ್ಮಹತ್ಯೆ ಪ್ರಕರಣ- ಹೊಂಡಕ್ಕೆ ಹಾರಿ ಶವಗಳನ್ನು ತೆಗೆದು ಸಹಾಯ ಮಾಡಿದ ವ್ಯಕ್ತಿಗೆ ಗೌರವ

Share This Article
Leave a Comment

Leave a Reply

Your email address will not be published. Required fields are marked *