ನಾನು ಬರಲ್ಲ ಅಂದ್ರೆ ಬರಲ್ಲ, ಏನು ಮಾಡ್ತೀರಾ ಮಾಡ್ಕೊಳ್ಳಿ: ಸೋಂಕಿತ ರಂಪಾಟ

Public TV
1 Min Read

ಬೆಂಗಳೂರು: ಕೊರೊನಾ ಸೋಂಕು ತಗುಲಿದ್ದರೂ ನಾನು ಆಸ್ಪತ್ರೆಗೆ ಬರಲ್ಲ ಎಂದು ಸೋಂಕಿತನೊಬ್ಬ ರಂಪಾಟ ಮಾಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ.

ಕೊರೊನಾ ಸೋಂಕಿತ ಕೆ.ಎಸ್.ಆರ್.ಟಿ.ಸಿ ಡ್ರೈವರ್ ಆಗಿದ್ದು, ಅಗಸ್ಟ್ 21ರಂದು ಬಂದ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇಂದು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲು ಬಿನ್ನಿಪೇಟೆಯಲ್ಲಿರುವ ಆತನ ಮನೆಗೆ ಅಧಿಕಾರಿಗಳು ಹೋಗಿದ್ದಾರೆ. ಈ ವೇಳೆ ಬೆಂಗಳೂರಿನ ಮಾಗಡಿ ರಸ್ತೆಯ ಕೆಪಿ ಅಗ್ರಹಾರದ ಬಿಬಿಎಂಪಿ ಮೆಡಿಕಲ್ ಆಫೀಸರ್ ಜೊತೆ ಸೋಂಕಿತ ಜಗಳವಾಡಿ ಕಿರಿಕ್ ಮಾಡಿದ್ದಾನೆ. ಇದನ್ನು ಓದಿ: ದೇವರು ಬಂದಿದೆ, ಪೊಲೀಸರು ಕಾಲಿಗೆ ಬೀಳ್ಬೇಕು – ಸೋಂಕಿತೆಯ ಹೈಡ್ರಾಮ

ಸದ್ಯ ಕರ್ತವ್ಯದಲ್ಲಿರುವ ಚಾಲಕ, ಹಲವರ ಸಂಪರ್ಕಕ್ಕೆ ಬಂದಿದ್ದಾನೆ. ಹೀಗಾಗಿ ಕೂಡಲೇ ಆಸ್ಪತ್ರೆಗೆ ಬನ್ನಿ ಎಂದು ಆರೋಗ್ಯಾಧಿಕಾರಿಗಳು ಮನೆ ಬಳಿ ಹೋಗಿದ್ದಾರೆ. ಈ ವೇಳೆ ಆತ ನನಗೆ ಏನು ಆಗಿಲ್ಲ. ನಾನು ಬರುವುದಿಲ್ಲ. ಇನ್ನೊಮ್ಮೆ ಟೆಸ್ಟ್ ಮಾಡಿ ಎಂದು ಕಿರಿಕ್ ಮಾಡಿದ್ದಾನೆ. ಜೊತೆಗೆ ನಾನು ಬರಲ್ಲ ಅಂದರೆ ಬರಲ್ಲ. ಏನು ಮಾಡ್ತೀರಾ ಮಾಡಿಕೊಳ್ಳಿ ಎಂದು ಅವಾಜ್ ಹಾಕಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *