ನಮ್ಮ ಲಾರಿಗೆ ದಂಡ ಹಾಕಿದ್ದು ಯಾಕೆ – ಲಾರಿ ಮಾಲೀಕರ ಸಂಘದ ಮುಖಂಡ ಅವಾಜ್

Public TV
1 Min Read

ಯಾದಗಿರಿ: ಲಾರಿ ಮಾಲೀಕನೊಬ್ಬ ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ನಿವೇನು ಆಫೀಸರೇನು ಎಂದು ಟ್ರಾಫಿಕ್ ಠಾಣೆಯ ಪಿಎಸ್‍ಐ ಪ್ರದೀಪ್ ಅವರಿಗೆ ಲಾರಿ ಮಾಲೀಕ ಅಬ್ಬಾಸ್ ಅಲಿ ಅವಾಜ್ ಹಾಕಿದ್ದಾನೆ. ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದ ಮುಂದೆ ಈ ಘಟನೆ ನಡೆದಿದೆ.

ಚಾಲನಾ ಪರವಾನಗಿ ಇಲ್ಲದೇ ಲಾರಿ ಚಾಲನೆ ಮಾಡಿದಕ್ಕೆ ಸಂಚಾರಿ ಪೊಲೀಸರಿಂದ ದಂಡ ಹಾಕಿದ್ದಾರೆ. ಇದಕ್ಕೆ ಅಕ್ರೋಶಗೊಂಡ ಲಾರಿ ಮಾಲೀಕ ಪೊಲೀಸರ ಜೊತೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಕೋಪಗೋಂಡ ಲಾರಿ ಮಾಲೀಕ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದಾನೆ. ನಾನು ಲಾರಿ ಮಾಲೀಕರ ಸಂಘದ ಮುಖಂಡನಿದ್ದೇನೆ ನಮ್ಮ ಲಾರಿಗೆ ದಂಡ ಯಾಕೆ ಹಾಕಿದ್ದೀರಿ ಎಂದು ಲಾರಿ ಮಾಲೀಕ ಅವಾಜ್ ಹಾಕಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *