ನಮ್ಮ ದೇಶದ ವಿಜ್ಞಾನಿಗಳಿಗೆ ಗೌರವ ಕೊಡಿ – ಲಸಿಕೆ ಪಡೆದವರ ಕಿವಿಮಾತು

Public TV
1 Min Read

ಬೆಂಗಳೂರು: ನಮಗೆ ಗೌರವ ಪಡೆಯೋಕೂ ಗೊತ್ತು, ಗೌರವ ಕೊಡುವುದಕ್ಕೂ ಗೊತ್ತು. ಇದು ಕೊರೊನಾ ವಾರಿಯರ್ಸ್ ಮನದಾಳದ ಮಾತು. ಹೌದು, ಕೊರೊನಾ ಲಸಿಕೆ ಪಡೆಯುತ್ತಿರುವವರ ಪ್ರಮಾಣ ಕಡಿಮೆಯಾಗುತ್ತಿರುವ ವಿಚಾರವಾಗಿ ಫಲಾನುಭವಿಗಳು ಎಲ್ಲರಿಗೂ ಕಿವಿ ಮಾತು ಹೇಳಿದ್ದಾರೆ.

ನಗರದ ವಿಕ್ಟೋರಿಯಾ ಆಸ್ಪತ್ರೆಯ ಅಟೆಂಡರ್ ನಾಗರತ್ನ ನ್ಯೂರೋ ಸರ್ಜರಿ ವಿಭಾಗ ಹಾಗೂ ನರ್ಸಿಂಗ್ ಅಧಿಕಾರಿ ಮಹೇಶ್ ಲಸಿಕೆ ಪಡೆದ ಅನುಭವ ಹಾಗೂ ತಾವು ಕೊರೊನಾ ವಾರಿಯರ್ಸ್ ಆಗಿ ಗೌರವ ಪಡೆದಿದ್ದೀವಿ. ಈಗ ಕೊರೊನಾ ಲಸಿಕೆ ಕಂಡು ಹಿಡಿದ ದೇಶದ ವಿಜ್ಞಾನಿಗಳಿಗೆ ಗೌರವ ಸೂಚಿಸುವ ಸಮಯ ತಪ್ಪದೇ ಲಸಿಕೆ ಪಡೆಯಿರಿ ಎಂದಿದ್ದಾರೆ.

ಕೊರೊನಾ ಕರಾಳ ದಿನಗಳಲ್ಲಿ ಜೀವ ಬಿಗಿ ಹಿಡಿದು ಬದುಕಿದ್ದಿವಿ. ಕೊರೊನಾ ಲಸಿಕೆ ಬಂತು ಎಂದಾಕ್ಷಣ ಸಂಜೀವಿನಿ ಸಿಕ್ಕಂತೆ ಆಯಿತು. ಫಲಾನುಭವಿಗಳು ಬಹುತೇಕ ಹೆಲ್ತ್ ವರ್ಕರ್ಸ್ ನೀವೆಲ್ಲ ಲಸಿಕೆ ವಿಚಾರವಾಗಿ ಹಿಂದೇಟು ಬೇಡ. ಕಾಯುವುದಂತೂ ಬೇಡವೇ ಬೇಡ. ನಾವು ಮೊದಲು ಅನ್ನೊದನ್ನ ಮರೆಯಬೇಡ, ಅಪಾಯವಾದರು ಸರಿ, ಪ್ರಯೋಗವಾದರೂ ಸರಿ ಎಂಬ ಅಭಿಪ್ರಾಯ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *