ಚಿಕ್ಕಮಗಳೂರು: ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಿಲ್ ನೀಡುತ್ತಿದ್ದಂತೆ ಸಚಿವ ಸ್ಥಾನದ ಆಕಾಂಕ್ಷಿಗಳು ಮತ್ತೊಮ್ಮೆ ತಮ್ಮ ಇಂಗಿತವನ್ನ ಹೊರಹಾಕಿದ್ದಾರೆ. ನಮ್ಮ ಜನಾಂಗಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ನಮಗೂ ಸಚಿವ ಸ್ಥಾನ ನೀಡಿ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.
ಇಂದು ಮೂಡಿಗೆರೆಯಲ್ಲಿ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾತನಾಡಿದ ಶಾಸಕ, ನನಗೂ ಸಚಿವ ಸ್ಥಾನ ನೀಡಿ ಪಕ್ಷಕ್ಕೆ ಶಕ್ತಿಯಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವರು ಸಚಿವ ಸ್ಥಾನದ ಇಂಗಿತ ಹೊರಹಾಕ್ತಿರೋದು ಇದು ಮೂರನೇ ಬಾರಿ. ನಾನು ಸಚಿವ ಸ್ಥಾನದ ಆಕಾಂಕ್ಷಿ. ಜಿಲ್ಲೆಯಲ್ಲಿ ಓರ್ವ ಸಚಿವರಿದ್ದರು. ಈಗ ಅವರು ರಾಜೀನಾಮೆ ನೀಡಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನದ ಅಗತ್ಯವಿದೆ. ಕಾಫಿ ಸೇರಿದಂತ ವಿವಿಧ ಸಮಸ್ಯೆಗಳಿವೆ. ಹಾಗಾಗಿ ನನಗೂ ಸಚಿವ ಸ್ಥಾನ ನೀಡಿ ಎಂದು ಪ್ರಬಲವಾಗಿ ಕೇಳುತ್ತಿದ್ದೇನೆ ಎಂದರು.
ಸಚಿವ ಸ್ಥಾನ ಕೊಡೋದು ಬಿಡೋದು ವರಷ್ಠರಿಗೆ ಬಿಟ್ಟ ವಿಚಾರ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ. ಕಳೆದ ಹಲವು ಬಾರಿ ಕೂಡ ನನಗೆ ಮಿಸ್ ಆಗಿತ್ತು. ಅಷ್ಟೆ ಅಲ್ಲದೆ ಜಿಲ್ಲೆಯಲ್ಲಿ ಸೋತವರು-ಗೆದ್ದವರೂ ಎಲ್ಲರಿಗೂ ಒಂದೊಂದು ಸ್ಥಾನ ಕೊಟ್ಟಿದ್ದಾರೆ. ಮೂರು ಬಾರಿ ಸರ್ಕಾರ ರಚನೆಯಾದರೂ ನಮ್ಮ ಜನಾಂಗಕ್ಕೆ ಯಾವುದೇ ಪ್ರಾತಿನಿದ್ಯ ಕೊಟ್ಟಿಲ್ಲ. ನಮ್ಮ ಜನಾಂಗದ ದೃಷ್ಟಿಯಿಂದಲೂ ಒಳ್ಳೆಯದು. ನಮ್ಮ ಜನಾಂಗಕ್ಕೆ ನಾವು ಉತ್ತರ ಕೊಡಲು ಆಗ್ತಿಲ್ಲ. ಹಾಗಾಗಿ ದಯಮಾಡಿ ನಮಗೂ ಸಚಿವ ಸ್ಥಾನ ಕೊಡಿ ಎಂದು ಆಗ್ರಹಿಸಿದ್ದಾರೆ.
ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ನಾವೂ ಶಕ್ತಿಯಾಗಿ ಕೆಲಸ ಮಾಡುತ್ತೇವೆ. ನಮ್ಮ ಸಿ.ಟಿ ರವಿ ಅವರು ಇದ್ದರು. ಅವರು ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಈಗ ನಮಗೆ ಕೊಡಿ ಎಂದು ಸಚಿವ ಸ್ಥಾನದ ಆಸೆಯನ್ನ ಮತ್ತೊಮ್ಮೆ ಹೊರಹಾಕಿದ್ದಾರೆ. ಮೊದಲ ಬಾರಿ ಸರ್ಕಾರ ರಚನೆಯಾದಾಗ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೂ ಅವರು ಹೋಗಿರಲಿಲ್ಲ. ಎರಡನೇ ಬಾರಿಯೂ ನಾನೂ ಸಚಿವ ಸ್ಥಾನದ ಆಕಾಂಕ್ಷಿ ಯಡಿಯೂರಪ್ಪ ನಮ್ಮ ನಾಯಕ. ನಮಗೂ ಕೊಡುತ್ತಾರೆಂದು ನಂಬಿಕೆ ಇದೆ ಎಂದಿದ್ದರು. ಈಗ ಮೂರನೇ ಬಾರಿ ಈಗಲೂ ಸಚಿವ ಸ್ಥಾನದ ಬಯಕೆಯನ್ನ ಪ್ರಬಲವಾಗಿ ಹೊರಹಾಕಿದ್ದಾರೆ.