ನಮಗೆ ಆಗದವರು ನಮ್ಮ ಹೆಸರು ಹೇಳಿರ್ಬೋದು: ಗೀತಾಭಾರತಿ ಭಟ್‍

Public TV
1 Min Read

ಬೆಂಗಳೂರು: ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಗಟ್ಟಿಮೇಳ ಧಾರವಾಹಿಯ ವಿಕ್ರಾಂತ್ ಖ್ಯಾತಿಯ ಅಭಿಷೇಕ್ ದಾಸ್ ಮತ್ತು ಬ್ರಹ್ಮಗಂಟು ಧಾರಾವಾಹಿಯ ಗೀತಾಭಾರತಿ ಭಟ್‍ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಈ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಗೀತಾಭಾರತಿ, ಡ್ರಗ್ ಕೇಸ್ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಬಂದಿರುವುದು ನಿಜ. ನಾನು ಈ ವಿಚಾರವಾಗಿ ಪ್ಯಾನಿಕ್ ಆಗಿದ್ದೇನೆ. ವಿಚಾರಣೆಗೆ ಕರೆದಿದ್ದಾರೆ ಎಂದರೆ ನಾವು ತಪ್ಪು ಮಾಡಿದ್ದೇವೆ ಎಂದಲ್ಲ. ನಮಗೆ ಆಗದವರು ನನ್ನ ಹೆಸರು ಹೇಳಿರಬಹುದು. ವಿಚಾರಣೆಗೆ ಹಾಜರಾಗೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ಇಬ್ಬರು ಡ್ರಗ್ ಪೆಡ್ಲರ್‌ಗಳು ಅರೆಸ್ಟ್ – ಅಯ್ಯಪ್ಪ, ಲೂಸ್ ಮಾದ ಯೋಗಿ ವಿಚಾರಣೆ

ಅಭಿಷೇಕ್ ದಾಸ್ ಮತ್ತು ಗೀತಾಭಾರತಿ ಭಟ್ ಇಂದು ಆಂತರಿಕ ಭದ್ರತಾ ದಳದ ಎದುರು ಹಾಜರಾಗಬೇಕಿದೆ. ಸೆಪ್ಟಂಬರ್ 19ರಂದು ಮಾಜಿ ಕ್ರಿಕೆಟರ್ ಅಯ್ಯಪ್ಪ, ಸೀರಿಯಲ್ ನಟಿ ರಶ್ಮಿ ಚಂಗಪ್ಪ ವಿಚಾರಣೆಯೂ ನಡೆದಿದೆ. ಸೆಪ್ಟೆಂಬರ್ 12ರಂದು ಪೀಣ್ಯ ಪೊಲೀಸರ ಕೈಗೆ ಕೇರಳ ಮೂಲದ ಇಬ್ಬರು ಪೆಡ್ಲರ್‍ಗಳು ತಗ್ಲಾಕೊಂಡಿದ್ದರು. ಅವರ ಬಳಿ ಗಾಂಜಾ, ಎಲ್‍ಎಸ್‍ಡಿ ಮಾತ್ರೆಗಳು ಪತ್ತೆಯಾಗಿದ್ದವು. ವಿಚಾರಣೆ ವೇಳೆ ಸಿನಿಮಾ ಮತ್ತು ಸೀರಿಯಲ್ ನಟ-ನಟಿಯರಿಗೆ ಡ್ರಗ್ಸ್ ಸಪ್ಲೈ ಮಾಡ್ತಿರೋದರ ಬಗ್ಗೆ ಬಾಯ್ಬಿಟ್ಟಿದ್ರು.

Share This Article
Leave a Comment

Leave a Reply

Your email address will not be published. Required fields are marked *