ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದ್ರು: ಸೌಮ್ಯ ರೆಡ್ಡಿ

Public TV
1 Min Read

ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಜನ ಇವತ್ತು ಬೆಡ್, ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಸರ್ಕಾರದ ಕಿಡಿಕಾರಿದರು.

ಆಸ್ಪತ್ರೆಗಳಲ್ಲಿ ಇಂದಿಗೂ ಬೆಡ್ ಸಿಗುತ್ತಿಲ್ಲ. ನಾನೇ ಎಷ್ಟೇ ಬಾರಿ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಇದುವರೆಗೂ ನಮ್ಮ ಯಾವುದೇ ಸಲಹೆಯನ್ನು ಸರ್ಕಾರ ಸ್ವೀಕರಿಸಿಲ್ಲ. ಕೇವಲ ನಮ್ಮನ್ನು ಕರೆದು ಕುರಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ನನ್ನ ಸ್ನೇಹಿತೆ ತಂದೆಗೆ ಬೆಡ್ ಸಿಗದೆ ಸತ್ತೇ ಹೋದರು. ನಾನೇ ಅಲ್ಲಿಗೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ನೋಡಿದ್ದೇನೆ. ಬಿಬಿಎಂಪಿ ದೃಢಿಕರಿಸಿದ ಬಳಿಕವೂ 2 ಗಂಟೆಯಾದರೂ ಆಕ್ಸಿಜನ್ ನೀಡಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಸರಿ ಸುಮಾರು 16 ಲಕ್ಷದ ವರೆಗೂ ಹಣ ಲೂಟಿ ಮಾಡುತ್ತಿದ್ದಾರೆ. ಕೊರೊನಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳು 3 ರಿಂದ 4 ಲಕ್ಷ ರೂ. ಪ್ಯಾಕೇಜ್ ಮಾಡುತ್ತಿವೆ. ಖಾಸಗಿ ಆಸ್ಪತ್ರೆ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸರ್ಕಾರ ಏನು ಉತ್ತರ ನೀಡುತ್ತೆ ಉತ್ತರಿಸಲಿ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *