ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಹೆದರಿಕೊಳ್ಳುವ ಅಗತ್ಯವಿಲ್ಲ- ಲೂಸ್ ಮಾದ ಯೋಗಿ ತಾಯಿ

Public TV
2 Min Read

– ಸಿನಿಮಾ ಸೋಲಿನಿಂದ ಯೋಗಿ ವಿಚಲಿತನಾಗಿದ್ದ ಅಷ್ಟೇ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಡ್ರಗ್ಸ್ ಕೇಸ್ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ನಟ ಲೂಸ್ ಮಾದ ಯೋಗಿಗೆ ಆಂತರಿಕ ಭದ್ರತಾ ವಿಭಾಗದ ಪೊಲೀಸರು ನೋಟಿಸ್ ನೀಡಿದ್ದು, ಶನಿವಾರ ಸಂಜೆಯೇ ನೋಟಿಸ್ ಲಭಿಸಿತ್ತು ಎಂದು ಲೂಸ್ ಮಾದ ಯೋಗಿ ತಂದೆ ಸಿದ್ಧರಾಜು ಅವರು ತಿಳಿಸಿದ್ದಾರೆ.

ಪೊಲೀಸರ ನೋಟಿಸ್ ಹಾಗೂ ವಿಚಾರಣೆ ಕುರಿತು ಪ್ರತಿಕ್ರಿಯೆ ನೀಡಿದ ಯೋಗಿ ತಂದೆ ಸಿದ್ಧರಾಜು ಅವರು, ಶನಿವಾರ ಸಂಜೆ ವೇಳೆಗೆ ಪುತ್ರ ಯೋಗಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದರು. ನೋಟಿಸ್ ಸಿಕ್ಕ ಬಳಿಕ ವಿಚಾರಣೆಗೆ ಹಾಜರಾಗಿದ್ದಾರೆ. ಆದರೆ ನನ್ನ ಮಗ ಯಾವುದೇ ರೀತಿಯ ತಪ್ಪು ಮಾಡಿಲ್ಲ. ಆದ್ದರಿಂದ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಯೋಗಿ ತನ್ನ ಜೀವನದಲ್ಲಿ ವಿಚಲಿತನಾಗಲು ನಾನೇ ಕಾರಣ ಎನ್ನಿಸುತ್ತಿದೆ. ಏಕೆಂದರೆ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳಲು ಬಲವಂತ ಮಾಡುತ್ತಿದೆ. ಸಾಲು ಸಾಲು ಸೋಲುಗಳು ಯೋಗಿಯನ್ನು ನೋವಿಗೆ ದೂಡಿತ್ತು ಅಷ್ಟೇ ಎಂದು ಹೇಳಿದ್ದಾರೆ.

ಸದ್ಯ ಪೊಲೀಸರು ಯಾವ ಮಾಹಿತಿ ಆಧಾರದ ಮೇಲೆ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಇಲ್ಲ. ಈಗಾಗಲೇ ವಿಚಾರಣೆಗೆ ಎದುರಿಸಿದ್ದು, ಮತ್ತೆ ವಿಚಾರಣೆಗೆ ಕರೆದಿಲ್ಲ. ಆದರೆ ಬೇರೆಯಾರ ಬಗ್ಗೆಯಾದರೂ ಮಾಹಿತಿ ಇದ್ದರೇ ತಿಳಿಸಿ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ ಎಂದರು.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಯೋಗಿ ತಾಯಿ ಅಂಬುಜಾ ಅವರು, ನನ್ನ ಮಗನಿಗೆ ಯಾವುದೇ ಡ್ರಗ್ಸ್ ಅಭ್ಯಾಸವಿಲ್ಲ. ನನ್ನ ಮಗನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಯೋಗಿ ಹೆಚ್ಚು ಸೈಲೆಂಟ್ ಆಗಿರುತ್ತಾನೆ ಅಷ್ಟೇ. ಈಗ ವಿಚಾರಣೆ ಹೋಗಿ ಬಂದ ನಂತರವೂ ಅವರು ಆರಾಮಾಗಿದ್ದಾರೆ. ಈ ಬಗ್ಗೆ ಕೆಲ ತಪ್ಪು ಮಾಹಿತಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಯೋಗಿಗೆ ಬೇರೆ ಯಾವುದೇ ಡ್ರಗ್ಸ್ ಅಭ್ಯಾಸವಿಲ್ಲ. ಖುಷಿಯಾದ ಸಂದರ್ಭದಲ್ಲಿ ಡ್ರಿಂಗ್ಸ್ ಮಾಡ್ತಾನೆ, ಸಿಗರೇಟ್ ಸೇದುತ್ತಾನೆ ಅಷ್ಟೇ. ಪೊಲೀಸರು ಸಂಶಯ ಪಡುವ ರೀತಿಯಲ್ಲಿ ಯಾವುದೇ ಘಟನೆ ನಡೆದಿಲ್ಲ. ವಿಚಾರಣೆಯನ್ನು ಯಶಸ್ವಿಯಾಗಿ ಎದುರಿಸಿದ್ದು, ಈಗ ಬಂಧನವಾಗಿರುವ ಬಗ್ಗೆಯೂ ಹೆಚ್ಚಿನ ಮಾಹಿತಿ ಇಲ್ಲ. ಸದ್ಯ ವಿಚಾರಣೆ ವೇಳೆ ಆತ ಎಲ್ಲಿ ಶೂಟಿಂಗ್ ಮಾಡಿದ್ದರು. ಯಾವ ಯಾವ ಪ್ರದೇಶಗಳಿಗೆ ಭೇಟಿ ನೀಡಿದ್ದರು ಎಂಬ ಮಾಹಿತಿ ಪಡೆದುಕೊಂಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಯೋಗಿ ಡಿಪ್ರೆಶನ್‍ಗೆ ಹೋಗಿದ್ದೆ ಎಂದು ಹೇಳಲು ಆತನ ಸಿನಿಮಾ ಸೋಲುಗಳೇ ಕಾರಣ. ಏಕೆಂದರೆ ಆತನ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಹಲವು ಸಮಸ್ಯೆ ಎದುರಾಗಿದ್ದವು. ಆ ಬಳಿಕ ಕೆಲ ಸಮಯ ವಿರಾಮ ಪಡೆದಿದ್ದ ಕಾರಣ ಹಾಗೇ ಹೇಳಿರಬಹುದು. ಹಲವು ಸಿನಿಮಾಗಳಲ್ಲಿ ಶೂಟಿಂಗ್ ಮಾಡಿದ್ದರೂ ಹಣ ನೀಡಿರಲಿಲ್ಲ. ಇದು ಯೋಗಿಗೆ ಹೆಚ್ಚು ಬೇಸರ ಮಾಡಿತ್ತು. ಈಗ ಆತ ಉತ್ತಮ ಕಥೆ ಆಯ್ಕೆ ಮಾಡಿಕೊಂಡು ಮತ್ತೆ ಕನ್ನಡದ ಅಭಿಮಾನಿಗಳ ಮುಂದೇ ಬರುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *