ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

Public TV
2 Min Read

– ಪುನೀತ್, ರಾಘವೇಂದ್ರ ಹೆಸರಿನ ಆಸ್ತಿ ಖರೀದಿಗೆ ಮುಂದಾಗಿದ್ರಾ ದರ್ಶನ್?
– ‘ಲೋನ್’ ಕದನಕ್ಕೆ ‘ಆಸ್ತಿ’ ಜಗಳ ಮೂಲ ಕಾರಣನಾ?

ಬೆಂಗಳೂರು: ನಟ ದರ್ಶನ್, ಅರುಣಾ ಕುಮಾರಿ ಮತ್ತು ನಿರ್ಮಾಪಕ ಉಮಾಪತಿ ಲೋನ್ ಕದನಕ್ಕೆ ಸ್ಫೋಟಕ್ಕೆ ಟ್ವಿಸ್ಟ್ ಸಿಕ್ಕಿದೆ. ಈ ಲೋನ್ ಕದನಕ್ಕೆ ದರ್ಶನ್ ಮತ್ತು ಉಮಾಪತಿ ನಡುವಿನ ಆಸ್ತಿ ಜಗಳ ಕಾರಣನಾ ಅನ್ನೋ ಪ್ರಶ್ನೆಯೊಂದು ಮುನ್ನಲೆ ಬಂದಿದೆ. ಇಂದು ಉಮಾಪತಿ ಅವರೇ, ನನ್ನ ಬಳಿಯಲ್ಲಿರುವ ಪ್ರಾಪರ್ಟಿ ದರ್ಶನ್ ಕೇಳಿದ್ದು ನಿಜ, ನಾನು ಕೊಡಲ್ಲ ಅಂತ ಹೇಳಿರೋದು ಸಹ ನಿಜ ಅಂತ ಒಪ್ಪಿಕೊಂಡಿದ್ದಾರೆ.

ನಾನು ಪ್ರಾಪರ್ಟಿ ಕೊಡಲ್ಲ ಅಂತ ಹೇಳಿದ್ಮೇಲೆ ದರ್ಶನ್ ಸುಮ್ಮನಾಗಿದ್ದರು. ಆದ್ರೆ ಈ ವಿಚಾರ ಮಾಧ್ಯಮಗಳಲ್ಲಿ ಬಂದಿದ್ದರಿಂದ ಸ್ಪಷ್ಟನೆ ನೀಡುತ್ತಿದ್ದೇನೆ. ಅದು ಪುನೀತ್ ರಾಜ್‍ಕುಮಾರ್ ಮತ್ತು ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಸೇರಿದ ಆಸ್ತಿ. ಸದ್ಯದ ಅದು ನನ್ನ ಬಳಿಯಲ್ಲಿದ್ದರಿಂದ ದರ್ಶನ್ ಕೇಳಿದ್ದರು. ಈ ವಿಷಯವನ್ನು ಇಲ್ಲಿಗೆ ಬಿಡೋದು ಉತ್ತಮ. ಅದು ದೊಡ್ಮನೆಯ ಆಸ್ತಿ ಎಂದರು. ಈ ವಿಷಯವಾಗಿ ದರ್ಶನ್ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಆ ಆಸ್ತಿಯನ್ನ ದರ್ಶನ್ ಅವರಿಗೆ ನೀಡಿದ್ರೆ ಅದು ಬೇರೆ ಆಯಾಮ ಪಡೆದುಕೊಳ್ಳುತ್ತೆ ಅಂತ ನೀಡಲಿಲ್ಲ ಎಂದು ಉಮಾಪತಿ ಸ್ಪಷ್ಟಪಡಿಸಿದರು.

ಅರುಣಾ ಕುಮಾರಿ ಬ್ಯಾಂಕ್ ಲೋನ್ ವಿಷಯ ಮತ್ತೊಂದು ಆಯಾಮ ಪಡೆದುಕೊಳ್ಳುವುದು ಬೇಡ. ಅರುಣಾ ಕುಮಾರಿ ಪ್ರಕರಣದ ತನಿಖೆ ನಡೆಯುತ್ತಿದೆ. ಆದ್ರೆ ಪ್ರಾಪರ್ಟಿ ವಿಚಾರ ಮುಗಿದಿರೋದು ಅಧ್ಯಾಯ. ಈ ವಿಷಯವನ್ನು ಮುಂದುವರಿಸಲು ನನಗೂ ಮತ್ತು ದರ್ಶನ್ ಅವರಿಗೆ ಇಷ್ಟವಿಲ್ಲ ಎಂದರು.

ಜೂನ್ 18ರಂದು ದರ್ಶನ್ ಮನೆಯಲ್ಲಿ ಸಭೆ ಸೇರಿದ್ದಾಗ ನನ್ನನ್ನೂ ಕರೆದಿದ್ರೆ ಇದು ಸಣ್ಣ ಮಟ್ಟದಲ್ಲಿಯೇ ಮುಗಿತಿತ್ತು. ಆದ್ರೆ ಅವರೆಲ್ಲ ಏನೋ ಮಾಡೋಕೆ ಹೊರಟಂತಿದೆ. ಹಾಗಾಗಿ ನಾನು ಕಾನೂನು ಮೂಲಕವಾಗಿಯೇ ಹೋರಾಟ ನಡೆಸುತ್ತೇನೆ. ಮಾಧ್ಯಮಗಳ ಮುಂದೆ ನಾನು ಒಬ್ಬನೇ ಬಂದು ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡೋಕೆ ಕಾರಣ ಸತ್ಯ. ಇಂದ್ರಜಿತ್ ಲಂಕೇಶ್ ಬಳಿ ಸಹಾಯ ಪಡೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಇಲ್ಲಿಯರೆಗೂ ಒಬ್ಬನೇ ಹೋರಾಟ ನಡೆಯುತ್ತಿದ್ದು, ಮುಂದುವರಿಯಲಿದೆ. ಬ್ಲ್ಯಾಕ್‍ಮೇಲ್ ಮಾಡಿಸಿಕೊಳ್ಳುವಂತೆ ವ್ಯಕ್ತಿ ಅಲ್ಲ. ನನ್ನ ಮೇಲೆ ಆರೋಪ ಮಾಡಿರೋ ಸಾಚಾಗಳಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಾನೊಬ್ಬ ಹಾರ್ಡ್ ವರ್ಕಿಂಗ್ ಆರ್ಡಿನರಿ ಮ್ಯಾನ್ – ಪಬ್ಲಿಕ್ ಟಿವಿ ಜೊತೆ ದರ್ಶನ್ ಆಪ್ತ ಹರ್ಷ ಮಾತು

Share This Article
Leave a Comment

Leave a Reply

Your email address will not be published. Required fields are marked *