ನಡು ರಸ್ತೆಯಲ್ಲಿ ತಾಯಿ, ಮಗಳ ಕೊಚ್ಚಿ ಕೊಲೆಗೆ ಯತ್ನ- ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Public TV
1 Min Read

ಬೆಂಗಳೂರು: ನಡು ರಸ್ತೆಯಲ್ಲಿ ತಾಯಿ, ಮಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿರುವ ಭಯಾನಕ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕಾಮಾಕ್ಯ ಬಳಿಯ ಇಂದಿರಾ ಕ್ಯಾಂಟೀನ್ ಬಳಿ ಘಟನೆ ನಡೆದಿದ್ದು, ದೀಪಾ ಶ್ರೀಕುಮಾರ್, ಮಗಳು ಹಿಷಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆ ತಾಯಿ, ಮಗಳ ಕೊಲೆಗೆ ಯತ್ನಿಸಲಾಗಿದೆ. ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದಾಋಎ. ಕೊಲೆ ಯತ್ನದ ಭಯಂಕರ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೆ.4ರಂದು ಕೊಲೆ ಯತ್ನ ನಡೆದಿದೆ.

ತಾಯಿ, ಮಗಳು ಬೈಕ್ ನಲ್ಲಿ ಹೋಗುತ್ತಿದ್ದಾಗ ಮತೊಂದು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾರ್ವಜನಿಕರು ರಕ್ಷಣೆಗೆ ಬರುತ್ತಿದ್ದಂತೆ ಬೈಕ್ ಹತ್ತಿ ಪರಾರಿಯಾಗಿದ್ದಾರೆ.

ದೀಪಾ ಶ್ರೀಕುಮಾರ್, ಆಸ್ಟಿನ್ ಸ್ಕೂಲ್ ಸಂಸ್ಥಾಪಕ ಶ್ರೀಕುಮಾರ್ ಅವರ ಎರಡನೇ ಪತ್ನಿ. ಪತಿ, ಪತ್ನಿಯ ನಡುವಿನ ಆಸ್ತಿ ವ್ಯಾಜ್ಯ ಕೋರ್ಟ್ ನಲ್ಲಿದೆ. ತಾಯಿ, ಮಗಳು ಬದುಕಿದ್ರೆ ತಾನೆ ವ್ಯಾಜ್ಯ, ಅವರನ್ನೇ ಮುಗಿಸಿದರೆ ಪೂರ್ತಿ ಆಸ್ತಿ ನಮ್ಮದಾಗಲಿದೆ. ಈ ಉದ್ದೇಶದಿಂದಲೇ ದೀಪಾ, ಮಗಳು ಹಿಷಿತಾ ಮುಗಿಸಲು ಯತ್ನಿಸಲಾಗಿದೆ. ಶ್ರಿಕುಮಾರ್, ಮಗ, ಮಗಳು ಹಾಗೂ ಅಳಿಯ ಸುಪಾರಿ ಕೊಟ್ಟಿದ್ದು, ಈ ಹಿನ್ನೆಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ತಾಯಿ ಮಗಳು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕುಮಾರ್, ಮಗ ಜಯಂತ್, ಮಗಳು ಮೊನಿಷಾ, ಅಳಿಯ ನವೀನ್ ವಿರುದ್ಧ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *