ನಡುರಸ್ತೆಯಲ್ಲಿಯೇ ಮಲ್ಲಿಗೆ ಚೆಲ್ಲಿ ರೈತನ ಆಕ್ರೋಶ

Public TV
0 Min Read

ಶಿವಮೊಗ್ಗ: ರೈತನೊಬ್ಬ ನಡು ರಸ್ತೆಯಲ್ಲಿಯೇ ಹೂವು ಚೆಲ್ಲಿ ಆಕ್ರೋಶ ಹೊರಹಾಕಿದ ಘಟನೆ ಶಿವಮೊಗ್ಗದ ಪೊಲೀಸ್ ಚೌಕಿಯಲ್ಲಿ ನಡೆದಿದೆ.

ರೈತ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಯಡವಾಲ ಗ್ರಾಮದ ನಿವಾಸಿ. ಈತ ಯಡವಾಲ ಗ್ರಾಮದಿಂದ ಶಿವಮೊಗ್ಗದ ಮಾರುಕಟ್ಟೆಗೆ ಹೂವು ಮಾರಾಟಕ್ಕೆ ಬಂದಿದ್ದ. ಸಾಮಾನ್ಯವಾಗಿ ಹೂವಿನ ವ್ಯಾಪಾರ ಮಧ್ಯಾಹ್ನದ ನಂತರ ಆಗುತ್ತೆ. ಆದರೆ ಇದೀಗ ಲಾಕ್ ಡೌನ್ ಇರುವ ಕಾರಣ ಮಧ್ಯಾಹ್ನದ ವೇಳೆ ಮಾರುಕಟ್ಟೆ ಇಲ್ಲ.

ಮಧ್ಯಾಹ್ನ ಮಾರುಕಟ್ಟೆ ಇಲ್ಲದ ಕಾರಣ ಮುಂಜಾನೆಯೇ ಮಾರುಕಟ್ಟೆಗೆ ಹೂವು ತಂದಿದ್ದ ರೈತ ಬೆಲೆ ಇಲ್ಲದ ಕಾರಣ ನಡು ರಸ್ತೆಯಲ್ಲಿ ಸುರಿದು ಆಕ್ರೋಶ ಹೊರಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *