ನಟರಾಜನ್‍ಗೆ ಪ್ರಶಸ್ತಿ ನೀಡಿದ ಪಾಂಡ್ಯ – ನೋವು ಹೊರಹಾಕಿದ ಕನೇರಿಯಾ

Public TV
2 Min Read

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಮಗೆ ಲಭಿಸಿದ್ದ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನ ಟಿ.ನಟರಾಜನ್ ಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಾರ್ದಿಕ್ ಪಾಂಡ್ಯ ಮತ್ತು ನಟರಾಜನ್ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡಿರುವ ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ತಮ್ಮ ನೋವನ್ನ ಹೊರ ಹಾಕಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನ 2-1ರ ಅಂತರದಲ್ಲಿ ಭಾರತ ತನ್ನದಾಗಿಸಿಕೊಂಡಿತ್ತು. ಈ ಪಂದ್ಯಗಳಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿನಿಶರ್ ಮತ್ತು ಉತ್ತಮವಾಗಿ ಬ್ಯಾಟ್ಸಮನ್ ಅನ್ನಿಸಿಕೊಂಡಿದ್ರು. ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದರು. ಆದ್ರೆ ಈ ಪ್ರಶಸ್ತಿಯನ್ನ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿಟ್ವೆಂಟಿ ಸರಣಿಯಲ್ಲಿ ಆಡಿದ್ದ ನಟರಾಜನ್ ಅವರಿಗೆ ನೀಡಿದ್ದರು.

ಪಾಕ್ ಆಟಗಾರ ಹೇಳಿದ್ದೇನು?: ಇದೊಂದು ಅದ್ಭುತವಾದ ಫೋಟೋ. ಹಾರ್ದಿಕ್ ಪಾಂಡ್ಯ ಯುವ ಪ್ರತಿಭೆ ನಟರಾಜನ್ ಅವರಿಗೆ ಪ್ರಶಸ್ತಿ ನೀಡಿ ಎಲ್ಲರ ಹೃದಯ ಗೆದ್ದರು. ಇದು ಯುವ ಆಟಗಾರರಿಗೆ ಹಾರ್ದಿಕ್ ಪಾಂಡ್ಯ ನೀಡಿರುವ ಸ್ಪೂರ್ತಿ ಮತ್ತು ಪ್ರೋತ್ಸಾಹ. ಆದ್ರೆ ನಮ್ಮಲ್ಲಿ ಯಾರು ಹೀಗೆ ಯೋಚಿಸುವುದೇ ಇಲ್ಲ. ಎಲ್ಲರನ್ನ ತಮ್ಮದನ್ನ ಮಾತ್ರ ಯೋಚನೆ ಮಾಡ್ತಾರೆ ಎಂದು ದಾನಿಶ್ ಕನೆರಿಯಾ ನೋವಿನ ಮಾತುಗಳನ್ನಾಡಿದ್ದಾರೆ.

ಆಸೀಸ್ ವಿರುದ್ಧ ಸರಣಿಯ ಮೂರು ಟಿ20 ಪಂದ್ಯಗಳಲ್ಲಿ ಆಡಿದ್ದ ನಟರಾಜನ್ ಒಟ್ಟು 6 ವಿಕೆಟ್ ಪಡೆದಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ 30 ರನ್ ನೀಡಿ 3 ವಿಕೆಟ್ ಪಡೆದಿದ್ದರು. 2ನೇ ಪಂದ್ಯದಲ್ಲಿ 4 ಓವರ್ ಮಾಡಿ ಕೇವಲ 20 ರನ್ ನೀಡಿ, 2 ವಿಕೆಟ್ ಪಡೆದಿದ್ದರು. ಕೊನೆಗೆ ಪಂದ್ಯದಲ್ಲಿ 4 ಓವರ್ ಮಾಡಿ 33 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಚೊಚ್ಚಲ ಸರಣಿಯಲ್ಲಿ ನಟರಾಜನ್ ಅವರ ಅದ್ಭುತ ಪ್ರದರ್ಶನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಪ್ರಶಸ್ತಿ ನೀಡಿ, ಜೊತೆಯಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *