ಧಾರವಾಡ ಬಳಿ ರಸ್ತೆ ಅಪಘಾತ – ವರದಿ ಕೇಳಿ ಗಡುವು ನೀಡಿದ ಸುಪ್ರೀಂಕೋರ್ಟ್

Public TV
1 Min Read

ಹುಬ್ಬಳ್ಳಿ: ಇತ್ತೀಚೆಗೆ ಧಾರವಾಡ ಬೈಪಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ 13 ಜನರು ಮೃತಪಟ್ಟ ಪ್ರಕರಣ ಹಾಗೂ ರಸ್ತೆ ಅಪಘಾತದ ವರದಿಯನ್ನು ಕೇಳಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ಜನವರಿ 15ರಂದು ಧಾರವಾಡ ಜಿಲ್ಲೆಯ ಇಟಿಗಟ್ಟಿ ಬಳಿ ನಡೆದ ರಸ್ತೆ ಅಪಘಾತದಲ್ಲಿ 13 ಜನರು ಸಾವನ್ನಪ್ಪಿದ್ದರು. ಘಟನೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕಮೀಟಿ ಆನ್ ರೋಡ್ ಸೆಪ್ಟಿ ಅಪಘಾತದ ಕುರಿತು ವರದಿಯನ್ನು ಕೇಳಿದೆ.

ರಸ್ತೆ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್ ಸಮಿತಿ ಧಾರವಾಡ ಅಪಘಾತದ ಕುರಿತು ವರದಿಯನ್ನ ಫೆಬ್ರವರಿ 15ರೊಳಗೆ ಸಲ್ಲಿಸುವಂತೆ ಸೂಚಿಸಿದೆ. ಈ ಕುರಿತು ರಾಜ್ಯದ ಪ್ರಿನ್ಸಿಪಲ್ ಸೆಕ್ರೆಟರಿ ಟ್ರಾನ್ಸಪೋರ್ಟ್ ಡಿಪಾರ್ಟ್ ಮೆಂಟ್ ಅವರಿಗೆ ನೋಟಿಸ್ ನೀಡಿದ್ದು, 32 ಕಿಲೊಮೀಟರ್ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಿಂದ ನಡೆದ ಅಪಘಾತಗಳ ಪ್ರಮಾಣವನ್ನು ಗಮನಿಸಿದ ಸುಪ್ರೀಂ ಕೋರ್ಟ್ ಈಗ ವರದಿ ನೀಡುವಂತೆ ಕೋರಿದೆ.

ಈ ಬೈಪಾಸ್ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗಿ ಸಂಭವಿಸಿದ್ದು. ಹತ್ತಾರು ಜನರು ಈ ಬೈಪಾಸ್ ರಸ್ತೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟ್ ಇದೀಗ ರಸ್ತೆ ಅಪಘಾತದ ಕುರಿತು ಸಮಗ್ರ ವರದಿ ಕೋರಿದ್ದು ಮುಂದಿನ ದಿನಗಳಲ್ಲಿ ಎನೂ ಕ್ರಮ ಕೈಗೊಳ್ಳಲಿದೆ ಅನ್ನೋದು ಕುತೊಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *