ಧರ್ಮಸ್ಥಳದಲ್ಲಿ ಬಾಣಸಿಗರಾದ ಕೆಎಸ್‌ಆರ್‌ಟಿಸಿ ನೌಕರರು

Public TV
0 Min Read

ಉಜಿರೆ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ರಾಜ್ಯದೆಲ್ಲೆಡೆ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಶನಿವಾರ ಧರ್ಮಸ್ಥಳದಲ್ಲಿರುವ ಕೆ.ಎಸ್.ಆರ್.ಟಿ.ಸಿ. ಡಿಪೋದಿಂದ ಯಾವುದೇ ಬಸ್‍ಗಳು ಸಂಚಾರ ಮಾಡಿಲ್ಲ.

ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸಾರಿಗೆ ಸಿಬ್ಬಂದಿ ಊಟ, ಉಪಹಾರದ ವ್ಯವಸ್ಥೆ ಮಾಡಿಕೊಂಡರು. ಚಾಲಕರು, ನಿರ್ವಾಹಕರು ಸೌಟು ಹಿಡಿದು ಊಟ ತಯಾರಿಸಿ, ಪ್ರಯಾಣಿಕರಿಗೂ ‘ನಳಪಾಕ’ದ ಸೊಗಡನ್ನು ತಿಳಿಸಿದರು.

ಪ್ರಯಾಣಿಕರ ಪರದಾಟ: ಶುಕ್ರವಾರ ಧರ್ಮಸ್ಥಳದಿಂದ ಎಲ್ಲಾ ಬಸ್‍ಗಳು ಸಂಚಾರ ಮಾಡಿವೆ. ಆದರೆ ಶನಿವಾರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಇವತ್ತು ಎರಡನೇ ಶನಿವಾರ ರಜಾದಿನವಾಗಿದ್ದು, ಲಕ್ಷದೀಪೋತ್ಸವಕ್ಕೆ ಅನೇಕ ಕಡೆಯಿಂದ ಪ್ರವಾಸಿಗರು ಬಂದಿದ್ದರು. ಮುಷ್ಕರದ ಬಿಸಿ ಅವರಿಗೂ ತಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *