ದೇವರಿಗೆ ಮೇಕೆ ಬಲಿಕೊಟ್ಟ ಪೊಲೀಸ್- ಕೆಲಸದಿಂದ ಅಮಾನತ್ತು

Public TV
1 Min Read

ಜೈಪುರ: ದೇವರ ಹರಕೆ ತೀರಿಸಲು ಮೇಕೆ ಬಲಿ ಕೊಟ್ಟ ಎಸ್‍ಐ ತನ್ನ ಕೆಲಸಕ್ಕೆ ಕುತ್ತು ತಂದುಕೊಂಡಿರುವ ಘಟನೆ ರಾಜಸ್ಥಾನದ ಬರಾನ್ ಜಿಲೆಯಯಲ್ಲಿ ನಡೆದಿದೆ.

ಭನ್ವರ್ ಸಿಂಗ್ ಅಮಾನತ್ತಯಗೊಂಡ ಅಧಿಕಾರಿಯಾಗಿದ್ದಾರೆ. ಮನೆಯಲ್ಲಿನ ದೇವರ ಕಾರ್ಯಕ್ಕೆ ದೇವಿಗೆ ಹರಕೆ ತೀರಿಸಲು ಮೇಕೆ ಬಲಿಕೊಟ್ಟು ಅಧಿಕಾರ ಕೆಲಸ ಕಳೆದುಕೊಂಡಿದ್ದಾರೆ.


ಫೆ.19 ರಂದು ಮನೆಯಲ್ಲಿ ನಡೆಯುವ ದೇವ ಕಾರ್ಯಕ್ರಮಕ್ಕೆಂದು ಭನ್ವಾರ್ ಸಿಂಗ್ ರಜೆ ಮೇಲೆ ಹೋಗಿದ್ದರು. ಈ ವೇಳೆ ಸಿಂಗ್ ಮೇಕೆಯ ಕುತ್ತಿಗೆಯನ್ನು ಕತ್ತರಿಸಿ ದೇವರಿಗೆ ಬಲಿ ಕೊಟ್ಟಿದ್ದಾರೆ. ಈ ವೀಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಣಿ ದಯಾ ಸಂಘ ಮತ್ತು ಸಾರ್ವಜನಿಕರು ಸಿಂಗ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಭನ್ವಾರ್ ಸಿಂಗ್‍ನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಪ್ರಕರಣವನ್ನು ದಾಖಲಿಸಿ ವಿಚಾರಣೆಯನ್ನು ಆರಂಭಿಸಿದ್ದೇವೆ ಎಂದು ಕೋಟಾ ಗ್ರಾಮೀಣ ಠಾಣೆಯ ಪೊಲೀಸ್ ವರಿಷ್ಟಾಧಿಕಾರಿ ಶರದ್ ಚೌದ್ರಿಯಾ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *