ದೆಹಲಿ ಚಲೋ ಆಂದೋಲನಕ್ಕೆ ರಾಜ್ಯದ ರೈತರು ಸಜ್ಜು

Public TV
1 Min Read

ಬೆಂಗಳೂರು: ಕೃಷಿ ಮಸೂದೆಗಳನ್ನು ವಿರೋಧಿಸಿ ಕಳೆದ ಎರಡು ತಿಂಗಳಿನಿಂದ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ರಾಜ್ಯದ ರೈತರು ಕೂಡ ಸಾಥ್ ನೀಡಲಿದ್ದಾರೆ. ಇದೇ ಫೆ.4 ರಿಂದ ಹಂತ ಹಂತವಾಗಿ ರಾಜ್ಯದ ರೈತರು ದೆಹಲಿ ಚಲೋ ಆಂದೋಲನ ಮಾಡಲಿದ್ದಾರೆ.


ರಾಜ್ಯದಿಂದ ಸುಮಾರು 6-8 ಸಾವಿರ ರೈತರು ದೆಹಲಿಯತ್ತ ರೈಲಿನಲ್ಲಿ ಹೋಗಲಿದ್ದಾರೆ. ದೆಹಲಿ ಚಲೋ ಆಂದೋಲನವನ್ನ ರಾಜ್ಯದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ದೆಹಲಿಗೆ ಹೋಗಲು ಸಿದ್ದತೆ ನಡೆಯುತ್ತಿದೆ.

ದೆಹಲಿ ಚಲೋ ಆಂದೋಲನ ಹೇಗಿರಲಿದೆ ಎಂಬುದರ ಬಗ್ಗೆ ಪಬ್ಲಿಕ್ ಟಿವಿ ಜೊತೆ ಕೊಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈಗಾಗಲೇ ರೈತರ ಜೊತೆ ಮಾತನಾಡಿದ್ದೇವೆ. ದೆಹಲಿಯ ರೈತರಿಗೆ ಬೆಂಬಲವಾಗಿ ರಾಜ್ಯದ ಹಲವು ಜಿಲ್ಲೆಗಳಿಂದ ಈ ಆಂದೋಲನದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *