ದೂರು ಕೊಡಲು ಬಂದ ಪೋಷಕರ ಸಂಘಕ್ಕೆ ‘ಹೋಗಿ ಸಾಯಿರಿ’ ಎಂದ ಸಚಿವ..!

Public TV
1 Min Read

ಭೋಪಾಲ್: ಗರಿಷ್ಠ ಶುಲ್ಕದ ಬಗ್ಗೆ ದೂರು ಕೊಡಲು ಬಂದ ಪೋಷಕರ ಸಂಘಕ್ಕೆ ‘ಹೋಗಿ ಸಾಯಿ’ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪಾರ್ಮರ್ ತೀವ್ರ ವಿವಾದಕ್ಕೀಡಾಗಿದ್ದಾರೆ.

ಹೌದು, ಪೋಷಕರ ಸಂಘವೊಂದು ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುವ ಬಗ್ಗೆ ಸಮಾಲೋಚಿಸಲು ಸಚಿವರ ಬಳಿ ತೆರಳಿತ್ತು. ಈ ವೇಳೆ ಪೋಷಕರ ಮನವಿಯನ್ನು ಶಿಕ್ಷಣ ಇಲಾಖೆ ನಿರಾಕರಿಸಿದರೆ ಏನು ಮಾಡಬೇಕು ಎಂದು ಕೇಳಿದಾಗ ಸಚಿವರು ಆಘಾತಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸಚಿವರ ಪ್ರತಿಕ್ರಿಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಸಂಬಂಧ ಪಾಲಕರ ಮಹಾಸಂಘದ ಅಧ್ಯಕ್ಷ ಕಮಲ್ ವಿಶ್ವಕರ್ಮ ಮಾತನಾಡಿ, ಹಲವು ಶಾಲೆಗಳು ಕೈಹೋರ್ಟ್ ಸೂಚನೆಯನ್ನು ಮೀರಿ ಹೆಚ್ಚಿನ ಶುಲ್ಕ ವಿಧಿಸುತ್ತವೆ. ಬೋಧನಾ ಶುಲ್ಕವನ್ನು ಹೊರತುಪಡಿಸಿ ಬೇರೆ ಯಾವುದೇ ಮೊತ್ತವನ್ನು ಪೋಷಕರಿಂದ ತೆಗೆದುಕೊಳ್ಳದಂತೆ ಹೈಕೋರ್ಟ್ ಶಾಲೆಗಳಿಗೆ ನಿರ್ದೇಶನ ನೀಡಿದೆ. ಆದರು ಕೂಡ ಶಾಲೆಗಳು ಹೆಚ್ಚಿನ ಹಣವನ್ನು ಪೋಷಕರಿಂದ ಪೀಕುತ್ತವೆ. ಈ ಹಿನ್ನೆಲೆಯಲ್ಲಿ ಹಲವಾರು ಪೋಷಕರು ಅಧಿಕ ಶುಲ್ಕ ವಿಧಿಸುವ ಬಗ್ಗೆ ಸಚಿವರ ಬಳಿ ದೂರು ನೀಡಲು ಮುಂದಾಗಿದ್ದೆವು ಎಂದರು. ಇದನ್ನೂ ಓದಿ: ಬಾಲಕಿಯ ಚಿಕಿತ್ಸೆಗಾಗಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡಿದ ಜೆರ್ಸಿಯನ್ನು ಹರಾಜಿಗಿಟ್ಟ ಆಟಗಾರ

ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ಮಾಡಿದ ಪರಿಣಾಮ ಹಲವು ಮಂದಿ ಪೋಷಕರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಆದರೆ ಹಲವು ಖಾಸಗಿ ಶಾಲೆಗಳು ಪೋಷಕರ ಕಷ್ಟವನ್ನು ಅರಿತುಕೊಳ್ಳದೆ ಶುಲ್ಕ ಹೆಚ್ಚಳ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

ಇತ್ತ ಖಾಸಗಿ ಶಾಲೆಗಳು ಹೆಚ್ಚಿನ ಶುಲ್ಕ ವಿಧಿಸುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಯ ಹಣ ಪೀಕುವ ವಿಚಾರವಾಗಿ ನಾವು ಹಲವಾರು ಬಾರಿ ಶಾಇಕ್ಷಣ ಸಚಿವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಂಗಳವಾರ ಮತ್ತೆ ಈ ಸಂಬಂಧ ಸಚಿವರನ್ನು ಭೇಟಿ ಮಾಡಲು ಹೋದಾಗ ಅವರು ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಕಮಲ್ ದೂರಿದರು.

https://twitter.com/AnitaReddyIn/status/1410174195560898570

Share This Article
Leave a Comment

Leave a Reply

Your email address will not be published. Required fields are marked *