ದಿವ್ಯಾ ಉರುಡುಗ ಕವಿತೆಗೆ ಮನೆಮಂದಿ ಫಿದಾ

Public TV
1 Min Read

ಬಿಗ್‍ಬಾಸ್ ಮನೆಯ ಗಾರ್ಡನ್ ಏರಿಯಾದದಲ್ಲಿ ದಿವ್ಯಾ ಉರುಡುಗ, ಅರವಿಂದ್, ರಘು, ವೈಷ್ಣವಿ ಮಾತನಾಡುತ್ತಿದ್ದರು. ಆಗ ಅಲ್ಲಿದ್ದ ಸ್ಪರ್ಧಿಗಳು ಹೇಳಿರುವ ಕವಿತೆಗಳು ಸಖತ್ ಮಜವಾಗಿದ್ದವು.

ವೈಷ್ಣವಿ ಜೆತೆಯಲ್ಲಿ ಹೆಚ್ಚು ಸಮಯ ಕಳೆಯುವ ರಘು ಆಗಾಗ ಅವರನ್ನು ಮೆಚ್ಚಿಸಲು ಕೆಲವು ಜೋಕ್‍ಗಳನ್ನು ಹೇಳುತ್ತಿರುತ್ತಾರೆ. ಬಿಗ್‍ಬಾಸ್ ಮನೆಯಲ್ಲಿವೆ ಸೇರೆಹಿಡಿಯುವ ಯಂತ್ರ …ನೀನು ಮಾಡಿದೆ ಮೋಡಿ ಏನು ಹಾಕಿದೆ ಮಂತ್ರ ಎಂದು ರಘು ವೈಷ್ಣವಿ ಹೇಳಿದ್ದಾರೆ. ಅಲ್ಲಿಯೇ ಪಕ್ಕದಲ್ಲಿದ್ದ ಸ್ಪರ್ಧಿಗಳು ಜೋರಾಗಿ ನಕ್ಕಿದ್ದಾರೆ.

ರಘುನ ಕವಿತೆಯನ್ನು ಕೇಳುತ್ತಿದ್ದಂತೆ ಅರವಿಂದ್ ಹೀಗೆ ಮಾಡುವವನು ರಘು ಕುತಂತ್ರ ಎಂದು ಅರವಿಂದ್ 2 ಸಾಲು ಕವಿತೆಯನ್ನು ಹೇಳಿದ್ದಾರೆ. ಆಗ ಅರವಿಂದ್ ಜೊತೆಯಲ್ಲಿಯೇ ಕುಳಿತಿದ್ದ ದಿವ್ಯಾ ಉರುಡುಗ ವೈಷ್ಣವಿ ಮೈ ಬಣ್ಣ ಹೊಳಪೇ… ರಘು ಆಟ ಕಳಪೆ ಎಂದು ದಿವ್ಯಾ ಉರುಡುಗ ಹೇಳಿದ ಕವಿತೆಗೆ ಮನೆಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.

ರಘು ವೈಷ್ಣವಿ ಮೇಲೆ ಕವಿತೆ ಹೇಳುತ್ತಿದ್ದರು. ಆದರೆ ರಘು ಮೇಲೆಯೆ ಸ್ಪರ್ಧಿಗಳು ಸಾಲು ಸಾಲು ಕವಿತೆಗಳನ್ನು ಬರೆದಿದ್ದಾರೆ. ರಘು ಈ ಕವಿತೆಗಳನ್ನು ತಮಾಷೆಯಾಗಿತೆಗೆದುಕೊಂಡು ನಕ್ಕು ಸುಮ್ಮನಾಗಿದ್ದಾರೆ. ಈ ವೇಳೆ ವೈಷ್ಣವಿ ರಘುಗೆ ಆನೆ, ಇರುವೆಯ ಡಬ್ಬಾ ಜೋಕ್ ಹೇಳಿ ನಗಿಸಲು ಪ್ರಯತ್ನಿಸಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ವಾರಾತ್ಯಂದ ಕಟ್ಟೆ ಪಂಚಾಯ್ತಿಯಲ್ಲಿ ಈ ವಾರವೂ ಸುದೀಪ್ ಪಾಲ್ಗೊಳ್ಳುವುದಿಲ್ಲ ಎನ್ನುವುದು ಖಚಿತವಾಗಿದೆ. ಈ ವಾರ ಯಾರು ಮನೆಯಿಂದ ಆಚೆ ಹೋಗುತ್ತಾರೆ. ಬಿಗ್‍ಬಾಸ್ ಈ ವಾರದ ವಾರಾಂತ್ಯದ ಕಾರ್ಯಕ್ರಮದಲ್ಲಿ ಏನು ವಿಶೇಷತೆ ಇರಲಿದೆ ಎಂಬುದನ್ನು ಕಾದುನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *