ದಿನ ಭವಿಷ್ಯ: 03-07-2020

Public TV
1 Min Read

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಮಧ್ಯಾಹ್ನ 1:18 ನಂತರ ಚರ್ತುದಶಿ ತಿಥಿ,
ಶುಕ್ರವಾರ, ಜ್ಯೇಷ್ಠ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:51 ರಿಂದ 12:27
ಗುಳಿಕಕಾಲ: ಬೆಳಗ್ಗೆ 7:39 ರಿಂದ 9:15
ಯಮಗಂಡಕಾಲ: ಮಧ್ಯಾಹ್ನ 3:39 ರಿಂದ 5:15

ಮೇಷ: ಸ್ಥಿರಾಸ್ತಿ ವ್ಯವಹಾರ ಮಾಡುವಿರಿ, ಬಂಧುಗಳಿಗಾಗಿ ಅಧಿಕ ಖರ್ಚು, ಆತ್ಮೀಯರೊಂದಿಗೆ ಓಡಾಟ, ನರ ದೌರ್ಬಲ್ಯ, ಕುತ್ತಿಗೆ ನೋವು, ಶರೀರದಲ್ಲಿ ಆಯಾಸ.

ವೃಷಭ: ಹಣಕಾಸು ವಿಚಾರವಾಗಿ ಅನುಕೂಲ, ಮಕ್ಕಳು ದೂರವಾಗುವರು, ಆಕಸ್ಮಿಕ ಬಂಧುಗಳ ಆಗಮನ.

ಮಿಥುನ: ಮಾರಾಟಗಾರರಿಗೆ ಅಧಿಕ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಬದಲಾಯಿಸುವ ಮನಸ್ಸು.

ಕಟಕ: ಅಜೀರ್ಣ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ತಂದೆಯಿಂದ ಅನುಕೂಲ.

ಸಿಂಹ: ಗಂಡು ಮಕ್ಕಳಿಂದ ಲಾಭ, ಮಿತ್ರರಲ್ಲಿ ಮನಃಸ್ತಾಪ, ಹಿರಿಯ ಸಹೋದರಿಯಿಂದ ಲಾಭ, ಆಕಸ್ಮಿಕ ಧನಾಗಮನ.

ಕನ್ಯಾ: ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ-ವಾಹನ ಯೋಗ, ಮಾತೃವಿನಿಂದ ಧನಾಗಮನ.

ತುಲಾ: ಬಂಧುಗಳಿಂದ ನಿಂದನೆ, ಉದ್ಯೋಗಕ್ಕಾಗಿ ಪ್ರಯಾಣ, ಪರಸ್ಥಳ ಪ್ರವಾಸ, ಸಾಲ ಬಾಧೆ, ಶತ್ರುಕಾಟದಿಂದ ನಿದ್ರಾಭಂಗ.

ವೃಶ್ಚಿಕ: ಆಕಸ್ಮಿಕ ಉದ್ಯೋಗದಲ್ಲಿ ಬಡ್ತಿ, ಉತ್ತಮ ಸ್ಥಾನಮಾನ ಪ್ರಾಪ್ತಿ, ಶುಭ ಕಾರ್ಯಗಳಿಗೆ ಸುಸಮಯ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಕಾನೂನು ಬಾಹಿರ ಸಂಪಾದನೆ.

ಧನಸ್ಸು: ಪೈನಾನ್ಸ್‍ನವರಿಗೆ ಲಾಭ, ವ್ಯವಹಾರಗಳಲ್ಲಿ ಅನುಕೂಲ, ಮನೋಭಿಲಾಷೆ ಈಡೇರುವುದು, ಸಂಗಾತಿಯಿಂದ ಮಾನಸಿಕ ನೆಮ್ಮದಿ.

ಮಕರ: ಉದ್ಯೋಗ ಬದಲಾವಣೆ, ಪರಸ್ಥಳ ವಾಸ, ಸ್ವಯಂಕೃತ್ಯಗಳಿಂದ ನಷ್ಟ, ಸಾಲ ಬಾಧೆ, ಮಂಗಳ ಕಾರ್ಯಗಳಿಗೆ ಸಿದ್ಧತೆ.

ಕುಂಭ: ಕುಟುಂಬಕ್ಕೆ ಸಾಲಗಾರರಿಂದ ಕಿರಿಕಿರಿ, ಶತ್ರುಗಳಿಂದ ಹಿಂಸೆ, ಮಕ್ಕಳಲ್ಲಿ ಆಸಕ್ತಿ ಕುಂಠಿತ, ಶೀತ ಬಾಧೆ, ಆರೋಗ್ಯದಲ್ಲಿ ಏರುಪೇರು.

ಮೀನ: ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ, ವಾಹನ ಖರೀದಿಗೆ ಮನಸ್ಸು, ವಸ್ತ್ರ, ಮೊಬೈಲ್ ಖರೀದಿ, ಹೆಚ್ಚು ವ್ಯಾಪಾರ ಮಾಡುವಿರಿ.

Share This Article
Leave a Comment

Leave a Reply

Your email address will not be published. Required fields are marked *