ದರೋಡೆ ಪ್ರಕರಣ- ಪೊಲೀಸರಿಗೆ ಸುಳಿವು ನೀಡಿದ ವಾಟ್ಸಪ್ ಸಂದೇಶ

Public TV
1 Min Read

– ಐವರ ಬಂಧನ,

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಓಮಿನಿ ವಾಹನವನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಮಾನ್ವಿ ಠಾಣೆ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನ ಬಂಧಿಸಿದ್ದಾರೆ.

ರಾಯಚೂರು ಮಾನ್ವಿ ಮಧ್ಯೆ ರಸ್ತೆಯಲ್ಲಿ ಓಮಿನಿ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದ ಶೇಕ್ ಅಬ್ದುಲ್, ಗುರುಕುಮಾರ್, ಸೈಯದ್ ಹಕೀಂ ,ಅಸ್ಲಾಂ ಷಾ ಹಾಗೂ ದರೋಡೆಗೆ ಸಾಥ್ ನೀಡಿದ್ದ ಓಮಿನಿ ಚಾಲಕ ಗುರುರಾಜನನ್ನ ಬಂಧಿಸಲಾಗಿದೆ.

ನಾಲ್ಕು ಜನರ ತಂಡ ವಾಹನವನ್ನ ಅಡ್ಡಗಟ್ಟಿ 5 ಲಕ್ಷ ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು, 15 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಮಾಡಿದ್ದರು. ದೂರು ದಾಖಲಿಸಿರುವ ಲಕ್ಷ್ಮಿದೇವಿ ಹಾಗೂ ಇನ್ನಿಬ್ಬರು ವಾಹನದಲ್ಲಿ ಮಾನ್ವಿ ಕಡೆಗೆ ಹೊರಟಿದ್ದಾಗ ದರೋಡೆ ನಡೆದಿತ್ತು.

ದರೋಡೆ ವೇಳೆ ಚಾಲಕನ ಮೊಬೈಲ್ ಕೆಳಗೆ ಬಿದ್ದಿದೆ. ಮೊಬೈಲ್‍ನ ವಾಟ್ಸಪ್ ಪರಿಶೀಲಿಸಿದಾಗ ಚಾಲಕನ ಅಸಲಿಯತ್ತು ಬಯಲಾಗಿದೆ. ದರೋಡೆಕೋರರಿಗೆ ಚಾಲಕ ಗುರುರಾಜ್ ವಾಟ್ಸಪ್ ಮೂಲಕ ಮಾಹಿತಿ ನೀಡುತ್ತಿದ್ದ. ಇದರ ಆಧಾರ ಮೇಲೆ ನಾಲ್ಕು ಜನ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದರು. ಐದು ಜನರನ್ನು ಬಂಧಿಸಿರುವ ಮಾನ್ವಿ ಪೊಲೀಸರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರ

Share This Article
Leave a Comment

Leave a Reply

Your email address will not be published. Required fields are marked *