ದಕ್ಷಿಣ ಕನ್ನಡದಲ್ಲಿ ಇಂದಿನಿಂದ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

Public TV
1 Min Read

– ಖಾಸಗಿ ಬಸ್ ಸಂಚಾರ ಇಲ್ಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ಭಾಗಶಃ ಅನ್ ಲಾಕ್ ಆಗಿದ್ದು ಮಾಲ್, ಸಿನಿಮಾ ಥಿಯೇಟರ್, ಧಾರ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೂ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಪಾಸಿಟಿವಿಟಿ ರೇಟ್ ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗದಿದ್ರೂ ಅನ್ ಲಾಕ್ ಮಾಡಲಾಗಿದ್ದು ಬಸ್ ಸಂಚಾರಕ್ಕೂ ಅನುಮತಿಸಲಾಗಿದೆ. ಬಸ್ ಗಳಲ್ಲಿ ಶೇ.50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಇರೋದ್ರಿಂದ ಕೆಎಸ್ ಆರ್ ಟಿಸಿ ಬಸ್ಸುಗಳು ಮಾತ್ರ ಸದ್ಯ ರಸ್ತೆಗಿಳಿಯಲಿದ್ದು, ಖಾಸಗಿ ಬಸ್ಸುಗಳು ಈ ತಿಂಗಳ ಅಂತ್ಯದವರೆಗೂ ಸೇವೆ ಆರಂಭಿಸೋದಿಲ್ಲ. ಬಸ್ಸಿನ ತಾಂತ್ರಿಕ ಸ್ಥಿತಿ ನೋಡಿ ಬಳಿಕ ಪೂರ್ಣ ಪ್ರಮಾಣದ ಪ್ರಯಾಣಿಕರ ಸಂಚಾರಕ್ಕೆ ಅನುಮತಿ ಸಿಕ್ಕಿದ ಬಳಿಕವೇ ರಸ್ತೆಗಿಳಿಯಲು ತೀರ್ಮಾನಿಸಲಾಗಿದೆ.

ಸೋಂಕು ಹೆಚ್ಚಾಗಲು ಕಾರಣವೇನು..?
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಳಿಕೆಯಾದ್ರೂ ದಕ್ಷಿಣ ಕನ್ನಡದಲ್ಲಿ ಮಾತ್ರ ಸೋಂಕಿನ ಪ್ರಯಾಣ ಏರಿಕೆ ಆಗ್ತಾನೇ ಇದೆ. ಜಿಲ್ಲೆಯಲ್ಲಿ ನಿನ್ನೆ 374 ಪಾಸಿಟಿವ್ ಕೇಸ್ ದಾಖಲಾಗಿದ್ರೆ, 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ. 5.68 ಇದೆ. ಒಟ್ಟು 6,820 ಆಕ್ಟೀವ್ ಕೇಸ್‍ಗಳು ಜಿಲ್ಲೆಯಲ್ಲಿವೆ. ಈವರೆಗೂ 1,080 ಮಂದಿ ಕೊರೋನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.

ಕೆಲ ದಿನಗಳಿಂದ ಜಿಲ್ಲೆಯಲ್ಲಿ ಪಾಸಿಟಿವಿಟಿ ಏರುತ್ತಲೇ ಇದೆ. ಇದಕ್ಕೆ ಕಾರಣ ಟೆಸ್ಟಿಂಗ್ ಪ್ರಕ್ರಿಯೆ. ಹೌದು, ಈ ಹಿಂದೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 2 ರಿಂದ 3 ಸಾವಿರ ಸ್ಯಾಂಪಲ್‍ಗಳನ್ನು ಆರ್‍ಟಿಪಿಸಿಆರ್ ಟೆಸ್ಟ್‍ಗೆ ಒಳಪಡಿಸಲಾಗ್ತಿತ್ತು. ಆದರೆ ಇದೀಗ ಜಿಲ್ಲಾಡಳಿತದ ಸೂಚನೆಯಂತೆ ದಿನವೊಂದಕ್ಕೆ 8 ರಿಂದ 9 ಸಾವಿರ ಕೊರೋನಾ ಟೆಸ್ಟಿಂಗ್ ನಡೀತಿದೆ. ಗ್ರಾಮಗಳಲ್ಲಿ ಕೊರೋನಾ ಟೆಸ್ಟಿಂಗ್ ಹೆಚ್ಚಾಗಿ ನಡೀತಿದ್ದು ಪಾಸಿಟಿವ್ ಕೇಸ್‍ಗಳು ದಾಖಲಾಗ್ತಾನೇ ಇವೆ.

Share This Article
Leave a Comment

Leave a Reply

Your email address will not be published. Required fields are marked *