ದಂಡ ವಿಧಿಸೋ ಮುನ್ನ ನವ ಜೋಡಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದ ಅಧಿಕಾರಿಗಳು

Public TV
1 Min Read

ಹಾಸನ: ಸಾಮಾಜಿಕ ಅಂತರ ಪಾಲಿಸದ ವಧು-ವರರ ಪೋಷಕರಿಗೆ ಅಧಿಕಾರಿಗಳು ದಂಡ ವಿಧಿಸಿರೋ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸತ್ತಿಗಾಲ ಗ್ರಾಮದಲ್ಲಿ ನಡೆದಿದೆ.

ಕೋವಿಡ್ ನಿಯಮ ಸಂಬಂಧ ಸಕಲೇಶಪುರ ತಾಲೂಕು ಪಂಚಾಯತ್ ಅಧಿಕಾರಿ ಹರೀಶ್ ರೌಂಡ್ಸ್ ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮನೆಯೊಂದರ ಬಳಿ ಹೆಚ್ಚು ಜನ ಸೇರಿದ್ದರು. ಈ ವೇಳೆ ಪರಿಶೀಲನೆಗೆಂದು ಹೋದಾಗ ಹೆಚ್ಚು ಮಂದಿ ಸೇರಿ ಮದುವೆ ಮಾಡುತ್ತಿರೋದಾಗಿ ಕಂಡು ಬಂದಿದೆ.

ಅಧಿಕಾರಿಗಳು ನವದಂಪತಿಗಳಿಗೆ ಶುಭಹಾರೈಸಿ, ಪೋಷಕರಿಗೆ ದಂಡವಿಧಿಸಿದ್ದಾರೆ. ಅಧಿಕಾರಿಗಳು ಬಂದಾಗ ಮುಹೂರ್ತ ನಡೆಯುತ್ತಿದ್ದರಿಂದ ಅಕ್ಷತೆ ಹಾಕಿ, ವಧುವರರಿಗೆ ತಲಾ ಒಂದು ಸಾವಿರ ದಂಡ ಹಾಕಿದ್ದಾರೆ. ಹೆಚ್ಚು ಜನರು ವಿಧಿಸದಂತೆ ತಾಲೂಕುಪಂಚಾಯತ್ ಇಓ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *