ತೌಕ್ತೆ ಅಬ್ಬರ- ಹಡಗು ಮುಳುಗಡೆ 22 ಸಾವು, 188 ಜನರ ರಕ್ಷಣೆ, ಗುಜರಾತ್‍ನಲ್ಲಿ ಪ್ರಧಾನಿ ಮೋದಿ ಸಮೀಕ್ಷೆ

Public TV
2 Min Read

– ಇಬನ್ನೂ 75 ಜನ ನಾಪತ್ತೆ, ಮುಂದುವರಿದ ನೌಕಾಪಡೆ ಕಾರ್ಯಾಚರಣೆ

ನವದೆಹಲಿ: ಗುಜರಾತ್ ಹಾಗೂ ಮುಂಬೈನಲ್ಲಿ ತೌಕ್ತೆ ಅಬ್ಬರ ಹೆಚ್ಚಾಗಿದ್ದು, ಒಎನ್‍ಜಿಸಿಯ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. 188 ಜನರನ್ನು ರಕ್ಷಣೆ ಮಾಡಲಾಗಿದ್ದು, 75 ಜನ ಸಿಬ್ಬಂದಿ ಕಾಣೆಯಾಗಿದ್ದಾರೆ. ಇತ್ತ ಗುಜರಾತ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸುತ್ತಿದ್ದಾರೆ.

ಗುಜರಾತ್ ಹಾಗೂ ಪಕ್ಕದ ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುನಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಗುಜರಾತ್‍ನ ಗಿರ್-ಸೋಮನಾಥ್, ಭಾವನಗರ ಹಾಗೂ ಅಮ್ರೇಲಿ ಜಿಲ್ಲೆಗಳಲ್ಲಿ ಹಾಗೂ ದಿಯುನ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಸರ್ವೇ ಬಳಿಕ ಅಹ್ಮದಾಬಾದ್‍ನಲ್ಲಿ ಪರಿಶೀಲನಾ ಸಭೆಯನ್ನು ಸಹ ನಡೆಸಿದ್ದಾರೆ.

ತೌಕ್ತೆ ಮುಂಬೈನಲ್ಲಿ ಸಹ ಭಾರೀ ಅನಾಹುತ ಸೃಷ್ಟಿಸಿದ್ದು, ಮುಂಬೈನಿಂದ 35 ನಾಟಿಕಲ್ ಮೈಲಿ ದೂರದಲ್ಲಿ 261 ಜನರಿದ್ದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್(ಒಎನ್‍ಜಿಸಿ)ನ ಬಾರ್ಜ್ ಪಿ-305 ಹಡಗು ಮುಳುಗಡೆಯಾಗಿ 22 ಜನ ಸಾವನ್ನಪ್ಪಿದ್ದಾರೆ. ಇನ್ನೂ 57 ಜನ ಕಾಣೆಯಾಗಿದ್ದಾರೆ. 188 ಜನರನ್ನು ಈ ವರೆಗೆ ರಕ್ಷಣೆ ಮಾಡಲಾಗಿದೆ. ಭಾರತೀಯ ನೌಕಾಪಡೆ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಇದೀಗ ತೌಕ್ತೆ ಚಂಡಮಾರುತ ದುರ್ಬಲಗೊಂಡಿದ್ದು, ಬುಧವಾರ ಬೆಳಗ್ಗೆ ದಕ್ಷಿಣ ರಾಜಸ್ಥಾನ ಹಾಗೈ ಪಕ್ಕದ ಗುಜರಾತ್ ಪ್ರದೇಶಗಳಲ್ಲಿ ಅಬ್ಬರಿಸಿತ್ತು. ರಾಜಸ್ಥಾನದ ಉದಯಪುರದ ಪಶ್ಚಿಮ-ನೈಋತ್ಯದಲ್ಲಿ 60.ಕಿ.ಮೀ ಹಾಗೂ ಗುಜರಾತ್‍ನ 110 ಕಿ.ಮೀ.ದೂರದಲ್ಲಿ ದುರ್ಬಲಗೊಂಡಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *