ತಿರುಪತಿ ಶಾಪದಿಂದ್ಲೇ ಆಂಧ್ರ ಸಿಎಂ ತಂದೆ ಸಾವು: ಮುತಾಲಿಕ್

Public TV
1 Min Read

ಧಾರವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಂದೆ ತಿರುಪತಿ ದೇವರ ಶಾಪದಿಂದಲೇ ಮೃತಪಟ್ಟಿದ್ದಾರೆ ಎಂದು ಹಿಂದೂಪರ ಸಂಘಟನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ತಿರುಪತಿ ಆಸ್ತಿ ಮಾರಾಟ ವಿಚಾರವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಆಂಧ್ರ ರಾಜ್ಯಪಾಲರಿಗೆ ಮನವಿ ಮಾಡಿ ಮಾತನಾಡಿದ ಅವರು, ಸೆಕ್ಯೂಲರ್ ಎನ್ನುವ ಇವರು ಹಿಂದೂ ದೇವಸ್ಥಾನದ ಮೇಲೆ ಆಘಾತ ಮಾಡುವ ಪ್ರಕ್ರಿಯೆ ನಡೆದಿದೆ. ಮದರಸಾ, ಚರ್ಚ್ ಆಸ್ತಿ ಬಗ್ಗೆ ಸರ್ಕಾರ ಮಾತಾನಾಡೋದಿಲ್ಲ. ಬದಲಾಗಿ ಹಿಂದೂಗಳ ಮೇಲೆನೇ ಕಣ್ಣು. ಜಗನ್ ತಂದೆ ಇದೇ ರೀತಿ ಮಾಡಿ ತಿರುಪತಿಯ ಶಾಪದಿಂದ ಸತ್ತು ಹೋದ. ಈ ರೀತಿ ಮಾಡಿದರೆ ನಿಮಗೂ ಕೂಡ ತಿರುಪತಿಯ ಶಾಪ ತಟ್ಟುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಂಧ್ರಪ್ರದೇಶ ಸರ್ಕಾರ ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಿ ಸರ್ಕಾರಕ್ಕೆ ಹಣ ಜಮಾ ಮಾಡುವ ಪ್ರಕ್ರಿಯೆ ಮಾಡುತ್ತಿದೆ. ಸದ್ಯ ಅದನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಆದರೆ ಮುಂದೆಯಾದರೂ ಈ ಪ್ರಕ್ರಿಯೆ ಮಾಡಿಯೇ ಮಾಡುತ್ತಾರೆ. ಅದಕ್ಕೆ ನಮ್ಮ ವಿರೋಧ ಇದೆ ಎಂದರು.

ತಿರುಪತಿ ದೇವಸ್ಥಾನ ಆಂಧ್ರದಷ್ಟೇ ಅಲ್ಲ, ಇಡಿ ಜಗತ್ತಿನ ಜನ ಬರುವ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಬಂದ ಭಕ್ತರ ಕಾಣಿಕೆ ಹಣ ಅದೇ ದೇವಸ್ಥಾನಕ್ಕೆ ಬಳಕೆ ಮಾಡಬೇಕು. ನಿಮ್ಮ ಸ್ವಾರ್ಥಕ್ಕೊಸ್ಕರ ಬಳಸಿಕೊಳ್ಳಬಾರದು. ಸ್ಥಿರ ಆಸ್ತಿ ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *