ತನ್ನ ಪತ್ನಿಯನ್ನು ಪಟಾಯಿಸಿದವನ ಕೊಲೆ ಮಾಡಿ ರಕ್ತ ಕುಡಿದ್ದಿದ ಆರೋಪಿ ಅರೆಸ್ಟ್

Public TV
1 Min Read

– ಅಪಹರಿಸಿ ರೈಲ್ವೇ ಟ್ರ್ಯಾಕ್ ಬಳಿ ಮರ್ಡರ್

ಬೆಂಗಳೂರು: ತನ್ನ ಪತ್ನಿಯನ್ನು ಪಟಾಯಿಸಿಕೊಂಡು ಹೋದವನನ್ನು ಬರ್ಬರವಾಗಿ ಕೊಲೆ ಮಾಡಿ ಅವನ ರಕ್ತವನ್ನು ಕುಡಿದಿದ್ದ ಆರೋಪಿಯನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಬ್ರೇಜ್, ನಿಜಾಮ್ ಹಾಗೂ ಅಲಿ ಅಂಡು ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ತಬ್ರೇಜ್ ಪತ್ನಿಯೊಂದಿಗೆ ವಾಸವಿದ್ದ ಶುಭಾನ್ ಅನ್ನು ಈ ಮೂವರು ಅಪಹರಿಸಿಕೊಂಡು ಬಂದು ಅವನನ್ನು ಹೊಡೆದು ಕೊಂದಿದ್ದರು. ಈ ಸಂಬಂಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಬ್ರೇಜ್ ಪತ್ನಿ ಮದುವೆಯಾದ ಬಳಿಕ ಶುಭಾನ್ ಜೊತೆ ಓಡಿ ಹೋಗಿದ್ದಳು. ಶುಭಾನ್ ಮತ್ತು ತಬ್ರೇಜ್ ಪತ್ನಿ ತುಮಕೂರಿನಲ್ಲಿ ವಾಸವಾಗಿದ್ದರು. ಈ ವಿಚಾರ ಒಂದು ದಿನ ತಬ್ರೇಜ್‍ಗೆ ಗೊತ್ತಾಗಿದೆ. ಆತ ಕೂಡಲೇ ತನ್ನ ಇಬ್ಬರು ಸ್ನೇಹಿತರಾದ ನಿಜಾಮ್ ಹಾಗೂ ಅಲಿಯನ್ನು ಕರೆದುಕೊಂಡು ತುಮಕೂರಿಗೆ ಹೋಗಿ ಶುಭಾನ್ ಅನ್ನು ಕಿಡ್ಯಾಪ್ ಮಾಡಿದ್ದಾನೆ. ನಂತರ ಅವನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರೈಲ್ವೇ ಟ್ರ್ಯಾಕ್ ಬಳಿ ಕೊಂದು ಹಾಕಿದ್ದಾರೆ. ಈ ವೇಳೆ ತಬ್ರೇಜ್, ಶುಭಾನ್ ರಕ್ತವನ್ನು ಕೂಡ ಕುಡಿದ್ದಿದ್ದಾನೆ.

ಈ ಪ್ರಕರಣವನ್ನು ದಾಖಲಿಸಿಕೊಂಡ ಡಿಜೆ ಹಳ್ಳಿ ಪೊಲೀಸರು ಇಂದು ಹಂತಕರನ್ನು ಬಂಧಿಸಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ತಬ್ರೇಜ್, ಪಿಕ್ ಪ್ಯಾಕೇಟರ್ ಆಗಿದ್ದು ಆತನ ಮೇಲೆ ಈಗಾಗಲೇ ಹಲವಾರು ಪ್ರಕರಣಗಳು ಇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *