ಟೆಂಟ್ ಹಾಕುವ ವೇಳೆ ವಿದ್ಯುತ್ ತಂತಿ ತಗುಲಿ ನಾಲ್ವರ ಸಾವು

Public TV
1 Min Read

ಬೆಂಗಳೂರು: ಗುರುವಾರ ಅದ್ಧೂರಿಯಾಗಿ ನಡೆಯಬೇಕಿದ್ದ ಗುದ್ದಲಿ ಪೂಜೆ ಜಾಗ ಸಂಪೂರ್ಣವಾಗಿ ಸ್ಮಶಾನವಾಗಿ ಬದಲಾಗಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆ ಬಳಿಯ ಇಂಡ್ಲಬೆಲೆಯಲ್ಲಿ ಇಂದು ನಾಲ್ವರು ಧಾರುಣವಾಗಿ ಸಾವನಪ್ಪಿದ್ದಾರೆ. ಕರೆಂಟ್ ಶಾಕ್ ನಿಂದಾಗಿ ನಾಲ್ವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಅತ್ತಿಬೆಲೆಯಲ್ಲಿರುವ ಉಷಾ ಟೆಂಟ್ ಹೌಸ್ ನ ನಾಲ್ವರು ಇಂದು ಅತ್ತಿಬೆಲೆ ಬಳಿಯ ಇಂಡ್ಲಬೆಲೆ ಬಳಿಯ ಅಪಾರ್ಟ್‍ಮೆಂಟ್ ಗುದ್ದಲಿ ಪೂಜೆಗೆ ಟೆಂಟ್ ಗಳು, ಶಾಮಿಯಾನ ಮತ್ತು ಲೈಟಿಂಗ್ಸ್ ಮೆಟೀರಿಯಲ್ ಗಳನ್ನು ತಂದಿದ್ದಾರೆ. ನಂತರ ಅದನ್ನೆಲ್ಲಾ ಸರಿಯಾದ ರೀತಿಯಲ್ಲಿ ಹಾಕುವಾಗ ಆಕಾಶ್, ಮಹಾದೇವ್, ವಿಷಕಂಠ, ಮತ್ತು ವಿಜಯ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ನಾಲ್ವರು ಉದ್ದದ ಕಂಬವೊಂದನ್ನು ನೇರವಾಗಿ ನಿಲ್ಲಿಸುವ ಸಂದರ್ಭದಲ್ಲಿ ಕಂಬದ ಮೇಲಿದ್ದ ಕರೆಂಟ್ ಕಂಬದ ಕರೆಂಟ್ ವೈರ್ ಗೆ ತಗುಲಿದೆ. ನಂತರ ವೈರ್ ನಿಂದ ಕರೆಂಟ್ ಪಾಸ್ ಆಗಿ ಈ ನಾಲ್ವರಿಗೂ ಶಾಕ್ ತಗುಲಿದೆ. ಈ ನಾಲ್ವರು ಸಹ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ನಂತರ ಸ್ಥಳೀಯರು ಉಳಿಸುವ ಪ್ರಯತ್ನಕ್ಕೆ ಬಂದರು ಸಹ ಯಾವುದೇ ಪ್ರಯೋಜನವಾಗಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಅತ್ತಿಬೆಲೆ ಪೊಲೀಸರು ಮತ್ತು ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ರು. ನಂತರ ಅಪಾಟ್ರ್ಮೆಂಟ್ ನವರ ಅಜಾಗರೂಕತೆಯಿಂದ ಘಟನೆ ನಡೆದಿದ್ಯಾ ಅನ್ನೋ ಸಂಶಯದಿಂದಾಗಿ ಇದೀಗ ಪ್ರಕರಣ ದಾಖಲಿಸಿಕೊಂಡು ಅತ್ತಿಬೆಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *