ಟೀಂ ಇಂಡಿಯಾ Vs ಸೆಂಡಾಫ್ ಲಭಿಸದ ಮಾಜಿ ಕ್ರಿಕೆಟಿಗರ ನಡ್ವೆ ಮ್ಯಾಚ್: ಇರ್ಫಾನ್ ಪಠಾಣ್

Public TV
1 Min Read

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಎಂಎಸ್ ಧೋನಿಗೆ ವಿದಾಯ ಪಂದ್ಯ ನಡೆಸಿಲ್ಲ ಎಂಬ ಚರ್ಚೆ ಜೋರಾಗಿತ್ತು. ಇದರ ನಡುವೆಯೇ ಇರ್ಫಾನ್ ಪಠಾಣ್ ಅಭಿಮಾನಿಗಳ ಬೇಸರವನ್ನು ದೂರ ಮಾಡಲು ಸಲಹೆಯೊಂದನ್ನು ಮುಂದಿಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಇರ್ಫಾನ್ ಟೀಂ ಇಂಡಿಯಾ ಆಟಗಾರರು ವರ್ಸಸ್ ಮಾಜಿ ಆಟಗಾರರು ನಡುವೆ ಪಂದ್ಯ ನಡೆಸಲು ಸಲಹೆ ನೀಡಿದ್ದಾರೆ. ಕಳೆದ ಒಂದು ದಶಕದ ಅವಧಿಯಲ್ಲಿ 11 ಮಂದಿ ಕ್ರಿಕೆಟಿಗರು ವಿದಾಯದ ಪಂದ್ಯ ಲಭಿಸದೆ ನಿವೃತ್ತಿಯಾಗಿದ್ದಾರೆ. ಕಳೆದ ವರ್ಷ ಯುವರಾಜ್ ಸಿಂಗ್ ನಿವೃತ್ತಿ ಘೋಷಿಸಿದ್ದರು. ಅದಕ್ಕೂ ಮುನ್ನ ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ 11 ಮಂದಿ ವಿದಾಯ ಪಂದ್ಯ ಲಭಿಸಲಿಲ್ಲ ಎಂದು ಇರ್ಫಾನ್ ಫಠಾಣ್ ಅಭಿಪ್ರಾಯಪಟ್ಟಿದ್ದು, ಈ ಆಟಗಾರರಿಗೆ ವಿದಾಯ ಪಂದ್ಯ ಏರ್ಪಡಿಸಬೇಕಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಇರ್ಫಾನ್ ಪಠಾಣ್ ನೀಡಿರುವ ಪಟ್ಟಿಯಲ್ಲಿ 2013ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಥಾನ ನೀಡಿಲ್ಲ. ಸಚಿನ್ ನಿವೃತ್ತಿ ವೇಳೆ ಬಿಸಿಸಿಐ ಸುಮಾರು ಕೋಟಿ ರೂ. ಖರ್ಚು ಮಾಡಿ ವಿದಾಯ ಪಂದ್ಯ ಏರ್ಪಡಿಸಿತ್ತು.

ಇರ್ಫಾನ್ ಪಠಾಣ್ ಪ್ರಕಟಿಸಿದ ತಂಡ: ಗೌತಮ್ ಗಂಭೀರ್, ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್, ಸುರೇಶ್ ರೈನಾ, ಧೋನಿ, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಜಹೀರ್ ಖಾನ್, ಪ್ರಗ್ಯಾನ್ ಓಜಾ.

Share This Article
Leave a Comment

Leave a Reply

Your email address will not be published. Required fields are marked *