ಜಾರಕಿಹೊಳಿಗೆ ಕೊರೊನಾ ಬಂದಿರುವುದು ಡೌಟ್, ಆಸ್ಪತ್ರೆಯಲ್ಲಿ ಇಲ್ಲ: ವಕೀಲ ಜಗದೀಶ್

Public TV
1 Min Read

ಬೆಂಗಳೂರು: ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿರುವುದು ಅನುಮಾನ ಎಂದು ಯುವತಿ ಪರ ವಕೀಲ ಜಗದೀಶ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಿಡಿ ಪ್ರಕರಣದ ಆರೋಪಿ ಕೊರೊನಾ ಘಟಕವನ್ನು ಸೇರಿದ್ದಾರೆ ಎನ್ನಲಾಗುತ್ತಿದೆ. ಆದರೆ ಆರೋಪಿ ಆಸ್ಪತ್ರೆಯಲ್ಲೇ ಇಲ್ಲ ಎಂದು ಜಗದೀಶ್ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ.

ತಮ್ಮ ಹೇಳಿಕೆಯನ್ನು ಖಚಿತ ಪಡಿಸಿಕೊಳ್ಳಲು ಬೆಳಗಾವಿ ವಕೀಲರಾದ ಚಂದನ್ ಗಿದ್ನಾವರ್ ಅವರಿಗೆ ಮಾಧ್ಯಮದವರ ಮುಂದೆ ಜಗದೀಶ್ ಕರೆ ಮಾಡಿದ್ದಾರೆ. ಆಗ ಚಂದನ್ ಅವರು ನಾವು ಆಸ್ಪತ್ರೆಯಲ್ಲಿ ವಿಚಾರಿಸಿದಾಗ ವೈದ್ಯರು ಹಾರಿಕೆಯ ಉತ್ತರವನ್ನು ಕೊಡುತ್ತಿದ್ದಾರೆ. ಸಿಡಿ ಕೇಸ್‍ನ ಆರೋಪಿ ನಮ್ಮ ಕಣ್ಣಿಗೆ ಇಲ್ಲಿ ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಆರೋಪಿ ಕೊರೊನಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂದು ನಮ್ಮ ಸ್ಥಳೀಯ ವಕೀಲರು ಮಾಹಿತಿ ಕೊಟ್ಟಿದ್ದಾರೆ. ಆರೋಪಿಗೆ ಕೊರೊನಾ ಬಂದಿರುವುದೆ ಅನುಮಾನ ಎಂದು ಜಗದೀಶ್ ಹೇಳಿದರು.

ಯಾವುದು ಸತ್ಯ ಎನ್ನುವುದು ತಿಳಿಯಬೇಕಾಗಿದೆ. ಅವರು ಆಸ್ಪತ್ರೆಯಲ್ಲಿ ಇಲ್ಲ ಎಂದಾದರೆ ಇದೊಂದು ಷಡ್ಯಂತ್ರವಾಗುತ್ತದೆ. ಸರ್ಕಾರದ ವ್ಯವಸ್ಥೆಗಳನ್ನು ಆರೋಪಿ ದುರ್ಬಳಕೆ ಮಾಡಿಕೊಂಡತೆ ಆಗುತ್ತದೆ. ಈ ಕುರಿತಾಗಿ ನಿಜಾಂಶ ಹೊರಬರಲಿ ಎಂದು ಅವರು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *