ಜಮೀನಿನಲ್ಲಿದ್ದ ಕಡಲೆ ಬೆಂಕಿಗಾಹುತಿ – 80 ಕ್ವಿಂಟಲ್ ನಷ್ಟ

Public TV
1 Min Read

ವಿಜಯಪುರ: ಜಮೀನಿನಲ್ಲಿದ್ದ 80 ಕ್ವಿಂಟಲ್ ನಷ್ಟು ಕಡಲೆ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ಜಿಲ್ಲೆಯ ಕಾರಜೋಳ ಗ್ರಾಮದಲ್ಲಿ ನಡೆದಿದೆ.

ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ರೈತ ಸಂಗಪ್ಪ ತೋಟದ ಅವರಿಗೆ ಸೇರಿದ ಕಡಲೆ ಇದಾಗಿದ್ದು, ಸುಮಾರು 12 ಎಕರೆಯಲ್ಲಿನ ಅಂದಾಜು 5 ಲಕ್ಷ ಮೌಲ್ಯದ ಕಡಲೆ ಬೆಳೆ ಅಗ್ನಿಗಾಹುತಿಯಾಗಿದೆ. ಇದರಿಂದ ರೈತ ಸಂಗಪ್ಪ ಅವರು ಕಂಗಾಲಾಗಿದ್ದಾರೆ.

ಸಾಲ ಮಾಡಿ ಕಡಲೆ ಬೆಳೆ ಬೆಳೆದಿದ್ದ ರೈತ ಸಂಗಪ್ಪ ರಾಶಿ ಮಾಡಲೆಂದು ಕಡಲೆ ಕೂಡಿಟ್ಟಿದ್ದರು. ಇದನ್ನ ಸಹಿಸದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಕಡಲೆ ಬೆಳೆಗೆ ಬೆಂಕಿ ಹಚ್ಚಿದ್ದಾರೆಂದು ರೈತ ಸಂಗಪ್ಪ ಆರೋಪಿಸುತ್ತಿದ್ದಾರೆ.

ನಾಲ್ಕೈದು ವರ್ಷಗಳಿಂದ ತನ್ನ ಬೆಳೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಲ್ಲದೇ, ಜಮೀನಿನಲ್ಲಿದ್ದ ಕೃಷಿ ಉಪಕರಣಗಳನ್ನು ಸಹ ಕಳ್ಳತನ ಮಾಡಿದ್ದಾರೆ. ಆದ್ದರಿಂದ ಈ ಖದೀಮರನ್ನ ಆದಷ್ಟು ಬೇಗ ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *