ಜನ ಗುಳೆ ಹೋಗುವುದನ್ನು ತಪ್ಪಿಸಲು ಅಧಿಕಾರಿಗಳಿಂದ ಹರಸಹಾಸ

Public TV
1 Min Read

– ನರೇಗಾ ಯೋಜನೆ ಸದ್ಬಳಕೆಗೆ ಮುಂದಾದ ಅಧಿಕಾರಿಗಳು

ಯಾದಗಿರಿ: ಜಿಲ್ಲೆಯ ಜನ ಬೆಂಗಳೂರು, ಮುಂಬೈ ಹಾಗೂ ಪುಣೆಗೆ ಗೂಳೆ ಹೋಗುವುದನ್ನು ತಪ್ಪಿಸಲು, ನರೇಗಾ ಯೋಜನೆ ಅಡಿ ಅವರ ಊರಲ್ಲೇ ಕೆಲಸ ನೀಡಲು ಜಿ.ಪಂ ಮುಂದಾಗಿದೆ.

ಗ್ರಾಪಂಚಾಯ್ತಿ ವ್ಯಾಪ್ತಿಯಲ್ಲಿ ಉಳು ತೆಗೆವುದು, ಬಸಿಗೌಲಿ ಸ್ವಚ್ಛತೆ, ಬದು ನಿರ್ಮಾಣ ಹಾಗೂ ಕೃಷಿ ಹೊಂಡ ಕೆಲಸಗಳು ನಡೆಯುತ್ತಿವೆ. ಒಂದು ಕುಟುಂಬಕ್ಕೆ 100 ದಿನ ಕೆಲಸ ಕೊಟ್ಟಿದ್ದು, ಪ್ರತಿಯೊಬ್ಬರಿಗೆ ದಿನಕ್ಕೆ 289 ರೂಪಾಯಿ ಕೂಲಿ ಸಿಗುತ್ತದೆ. ಅಲ್ಲದೇ ಒಂದು ವಾರದ ನಂತರ ನೇರವಾಗಿ ಅವರ ಖಾತೆ ಹಣ ಜಮೆಯಾಗುತ್ತದೆ. ಇದನ್ನೂ ಓದಿ: ಒಲಿಂಪಿಕ್ಸ್‌ ಆಯ್ಕೆಯಾಗುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ರೂ. 10 ಲಕ್ಷ ಪ್ರೋತ್ಸಾಹಧನ: ಡಾ. ನಾರಾಯಣಗೌಡ

ವಲಸೆ ಹೋದಾಗ ಕಟ್ಟಡ ಕೆಲಸ ಮಾಡುವಾಗ ಅನಾಹುತಗಳು ಸಂಭವಿಸುತ್ತವೆ. ಹೀಗಾಗಿ ಇಲ್ಲೇ ನರೇಗಾದಲ್ಲಿ ಕೆಲಸ ಕೊಡಲಾಗಿದೆ. ಉತ್ತಮವಾಗಿ ಕೆಲಸವೂ ನಡೆಯುತ್ತಿದೆ. ಬಸ್, ರೈಲಿನಲ್ಲಿ ಮೂಲಕ ಗುಳೆ ಹೋಗುವ ಜನರನ್ನು, ತಡೆದು ಅವರಿಗೆ ಜಾಗೃತಿ ಮೂಡಿಸಿ, ಜಿಲ್ಲೆಯಲ್ಲಿಯೆ ದುಡಿಯುವಂತೆ ಮನವೊಲಿಸಲು ಮುಂದಾಗಿ ಕೆಲವನ್ನು ಕೊಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *