ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ- ಸುಮಲತಾ

Public TV
1 Min Read

– ಮೈಶುಗರ್ ಕಾರ್ಖಾನೆ ಈ ವರ್ಷ ಆರಂಭ

ಮಂಡ್ಯ: ರಾಜಕೀಯ ವಿರೋಧ ಎಷ್ಟೇ ಇದ್ದರು ಸಹ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ, ನಾನು ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

 

ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯ ಕಾಮಗಾರಿಗಳನ್ನು ಸುಮಲತಾ ಅಂಬರೀಶ್ ವೀಕ್ಷಣೆ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಶುಗರ್ ಕಾರ್ಖಾನೆ ಈ ವರ್ಷ ಆರಂಭವಾಗುತ್ತದೆ. ಪ್ರತಿಯೊಂದು ವಿಷಕ್ಕೂ ವಿರೋಧಗಳು ಇರುತ್ತವೆ. ಇದರ ಬಗ್ಗೆ ತಲೆಕೆಡಿಸಿಕೊಂಡರೇ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಾನು ಜನರಿಗೆ ಮಾತು ಕೊಟ್ಟಿರುವ ಪ್ರಕಾರ ಮೈಶುಗರ್ ಕಾರ್ಖಾನೆ ಪುನಾರಂಭವಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರದ ಮೇಲು ಒತ್ತಡ ತರುತ್ತಿದ್ದೇನೆ. ಟೆಂಡರ್‍ನಲ್ಲಿ ಸ್ಪಲ್ಪ ವ್ಯತ್ಯಾಸ ಆಗಿದೆ. ಇದು ಸರಿ ಪಡಿಸಿಕೊಂಡು ಕಾರ್ಖಾನೆಯ ಆರಂಭ ಮಾಡಲಾಗುತ್ತದೆ. ಈ ವರ್ಷದಲ್ಲಿ ಮೈಶುಗರ್ ಆರಂಭವಾಗುತ್ತದೆ. ಇದರಿಂದ ರೈತರಿಗೆ ಒಳ್ಳೆಯದು ಆಗಲಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *