ಚಿಕ್ಕತಿರುಪತಿಯ ಹುಂಡಿಯಲ್ಲಿ 63 ಲಕ್ಷ ನಗದು, ಬೆಳ್ಳಿ, ಬಂಗಾರ, ವಿದೇಶಿ ಕರೆನ್ಸಿ ಪತ್ತೆ

Public TV
0 Min Read

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿರುವ ಶ್ರೀಪ್ರಸನ್ನ ವೆಂಕಟೇಶ್ವರಸ್ವಾಮಿ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದೆ.

ಈ ವೇಳೆ ಬೆಳ್ಳಿ, ಬಂಗಾರ, ನಗದು ಸೇರಿದಂತೆ ವಿದೇಶಿ ಕರೆನ್ಸಿ ಹುಂಡಿಯಲ್ಲಿ ಪತ್ತೆಯಾಗಿದೆ. 64 ಗ್ರಾಂ ಬಂಗಾರ, 327 ಗ್ರಾಂ ಬೆಳ್ಳಿ ಆಭರಣಗಳು ಕೂಡ ಸಂಗ್ರಹವಾಗಿವೆ. ಈ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.

ಮೂರು ತಿಂಗಳಲ್ಲಿ 63,97,964 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಹುಂಡಿ ಎಣಿಕೆಯ ವೇಳೆ ಮುಜರಾಯಿ ತಹಶೀಲ್ದಾರ್ ನಾಗವೇಣಿ ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *