ಚಿಕನ್ ನೀಡದ್ದಕ್ಕೆ ಡಾಬಾಗೆ ಬೆಂಕಿ ಇಟ್ರು

Public TV
1 Min Read

ಮುಂಬೈ: ಇಬ್ಬರು ವ್ಯಕ್ತಿಗಳು ಚಿಕನ್ ನೀಡದ ಕಾರಣಕ್ಕೆ ಡಾಬಾಗೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ಮಹಾರಾಷ್ಟ್ರದ ನಾಗ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳನ್ನು ಶಂಕರ್ ಟೇಡೆ(29) ಮತ್ತು ಸಾಗರ್ ಪಟೇಲ್(19) ಎಂದು ಗುರುತಿಸಲಾಗಿದೆ. ಇವರು ಭಾನುವಾರ ಬೆಲ್ಟರೋಡಿ ಪ್ರದೇಶದ ರಸ್ತೆ ಬದಿಯ ಡಾಬಾಗೆ ರಾತ್ರಿ ಸುಮಾರು 1 ಗಂಟೆ ಭೇಟಿ ನೀಡಿದ್ದಾರೆ. ಮದ್ಯಪಾನ ಸೇವಿಸಿದ ಸ್ಥಿತಿಯಲ್ಲಿದ್ದ ಇವರು ಚಿಕನ್ ನೀಡುವಂತೆ ಹೇಳಿದ್ದಾರೆ.

ಮಾಲೀಕರು ಚಿಕನ್ ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಇಬ್ಬರು ಕುಡಿದ ಮತ್ತಿನಲ್ಲಿ ಡಾಬಾಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ. ಆರೋಪಿಗಳ ವಿರುದ್ಧ ಡಾಬಾ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *