ಚಾಮರಾಜನಗರದಿಂದ ದೆಹಲಿ ಚಲೋ ಆರಂಭ

Public TV
1 Min Read

-ದೆಹಲಿಯತ್ತ ಹೊರಟ ಕರ್ನಾಟಕದ ರೈತರು

ಚಾಮರಾಜನಗರ: ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಹೋರಾಟಕ್ಕೆ ಕರ್ನಾಟಕದ ರೈತರು ಹೊರಟಿದ್ದಾರೆ. ರೈತರ ಪರ್ಯಾಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದಿಂದ ಭಾಗವಹಿಸಲು ಚಾಮರಾಜನಗರ ತಾಲೂಕು ಅಮೃತಭೂಮಿಯಲ್ಲಿ ರೈತ ನೇತಾರ ದಿ.ಪ್ರೊಫೆಸರ್ ನಂಜುಂಡಸ್ವಾಮಿ ಸಮಾಧಿ ಬಳಿ ರೈತ ಹೋರಾಟ ಯಾತ್ರೆಗೆ ಚಾಲನೆ ನೀಡಲಾಯಿತು.

ರಾಜ್ಯ ರೈತ ಮುಖಂಡ ಅರಳಾಪುರ ಮಂಜೇಗೌಡ ನೇತೃತ್ವದಲ್ಲಿ ರೈತ ಹೋರಾಟ ಯಾತ್ರೆ ಆರಂಭವಾಯಿತು. ರಾಜ್ಯದ ವಿವಿಧೆಡೆಯಿಂದ 200ಕ್ಕೂ ಹೆಚ್ಚು ರೈತರು ಲಾರಿಗಳಲ್ಲಿ ಪಯಣ ಮಾಡಲಿದ್ದು, ದಾರಿಯುದ್ದಕ್ಕೂ ದವಸ-ಧಾನ್ಯ ಸಂಗ್ರಹ ಮಾಡ್ತೀವಿ. ದೆಹಲಿಯಲ್ಲಿ ಹೋರಾಟ ನಿರತ ರೈತರಿಗೆ ದವಸ ಧಾನ್ಯ ನೀಡಲೂ ರಾಜ್ಯದ ರೈತರು ಮುಂದಾಗಿದ್ದಾರೆ. 53 ದಿನದಿಂದ ಹೋರಾಟ ನಡೆಯುತ್ತಿದ್ದರೂ ಕೂಡ ಪ್ರಧಾನಿ ಮೋದಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ಯಾರದೋ ನಾಮಕರಣದಲ್ಲಿ ಭಾಗವಹಿಸುವ ಮೋದಿ ಅವರಿಗೆ ರೈತರ ಜೊತೆ ಮಾತನಾಡುವಷ್ಟು ವ್ಯವದಾನವಿಲ್ಲ ಅಂತಾ ಆಕ್ರೋಶ ಹೊರಹಾಕಿದ್ರು. ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಕೂಡ ರ‍್ಯಾಲಿ ನಡೆಯಲಿದ್ದು ನಾವು ದೆಹಲಿಗೆ ತೆರಳಿ ನಿಮ್ಮೊಂದಿಗೆ ನಾವಿದ್ದೀವೆ. ನಮ್ಮೊಂದಿಗೆ ನೀವಿರಿ ಅನ್ನೋ ಸಂದೇಶ ಕೊಡುತ್ತೇವೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *