ಚಾಕು ಇರಿದು ಮಹಿಳೆಯ ಬರ್ಬರ ಹತ್ಯೆ

Public TV
0 Min Read

ರಾಯಚೂರು: ಚಾಕು ಇರಿದು ಮಹಿಳೆಯನ್ನು ಕೊಲೆಗೈದ ಘಟನೆಯೊಂದು ರಾಯಚೂರಿನ ಲಿಂಗಸಗೂರಿನ ಮುದಗಲ್ ಪಟ್ಟಣದ ವೆಂಕಟರಾಯಪೇಟೆಯಲ್ಲಿ ನಡೆದಿದೆ.

ನೇತ್ರಾವತಿ (33) ಕೊಲೆಯಾದ ಮಹಿಳೆ. ಸೋದರ ಸಂಬಂಧಿ ಶಿವರಾಜ್, ನೇತ್ರಾವತಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆಯ ಬಳಿಕ ಶಿವರಾಜ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಕೊಲೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *