ಗಾಂಜಾ ಮತ್ತಿನಲ್ಲಿ ಶಿವಾಜಿನಗರ ಸರ್ಕಲ್ ಬಳಿ ಪುಂಡರ ಮಾರಾಮಾರಿ

Public TV
0 Min Read

– ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಮತ್ತೆ ಪುಂಡರ ಉಪಟಳ

ಬೆಂಗಳೂರು: ಡಿಜೆ ಹಳ್ಳಿ ಪ್ರಕರಣ ಮಾಸುವ ಮುನ್ನವೇ ಶಿವಾಜಿನಗರದಲ್ಲಿ ಪುಂಡರ ಉಪಟಳ ಹೆಚ್ಚಾಗಿದ್ದು, ಗಾಂಜಾ ಮತ್ತಿನಲ್ಲಿ ಪುಂಡರಿಬ್ಬರು ಬಡಿದಾಡಿಕೊಂಡಿದ್ದಾರೆ.

ಶಿವಾಜಿನಗರ ಸರ್ಕಲ್‍ನಲ್ಲಿ ಗಲಾಟೆ ನಡೆದಿದ್ದು, ನಡು ಬೀದಿಯಲ್ಲೇ ಪುಂಡರಿಬ್ಬರು ಕಿತ್ತಾಡಿಕೊಂಡಿದ್ದನ್ನು ಕಂಡು ಸ್ಥಳೀಯರು ಭಯಗೊಂಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಡುಬೀದಿಯಲ್ಲಿ ಪುಂಡರು ಬಡಿದಾಡಿಕೊಂಡಿದ್ದು, ಆಟೋ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ.

ಗಾಂಜಾ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಮಾರ್ಕೆಟ್‍ನಲ್ಲಿ ಅಷ್ಟು ಜನರಿದ್ದರೂ ಯಾವುದನ್ನೂ ಲೆಕ್ಕಿಸದೆ ಪುಂಡರು ಮಾರಾಮಾರಿ ನಡೆಸಿದ್ದಾರೆ. ಘಟನೆಯಿಂದಾಗಿ ಮಾರುಕಟ್ಟೆಯಲ್ಲಿನ ಜನ ಆತಂಕಗೊಂಡು ಚದುರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *