ಕೋಟೆ ನಾಡಲ್ಲಿ ವರುಣನ ಅಬ್ಬರ- ಎಂಟು ವರ್ಷಗಳ ಬಳಿಕ ಕೋಡಿ ಬಿದ್ದ ಪಕ್ಕುರ್ತಿ ಕೆರೆ

Public TV
1 Min Read

– ರೈತರ ಮೊಗದಲ್ಲಿ ಮಂದಹಾಸ

ಚಿತ್ರದುರ್ಗ: ಜಿಲ್ಲೆಯಲ್ಲಿ ಈ ಬಾರಿ ವರುಣ ಕೃಪೆ ತೋರಿದ್ದು, ಈ ಮೂಲಕ ಕಳೆದ ಎಂಟು ವರ್ಷಗಳಿಂದ ಬರದ ಪರಿಸ್ಥಿತಿ ಎದುರಿಸುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಭಾರೀ ಮಳೆಯಿಂದಾಗಿ ಕೆರೆಗಳು ಕೋಡಿ ಬಿದ್ದಿವೆ.

ಮೊಳಕಾಲ್ಮೂರು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಕಳೆದ ರಾತ್ರಿ ಉತ್ತಮ ಮಳೆಯಾಗಿದ್ದು, ತಳವಾರ ಹಳ್ಳಿ ಬಳಿಯ ಸಿದ್ಲಹಳ್ಳ ತುಂಬಿ ಹರಿಯುತ್ತಿದೆ. ಅಲ್ಲದೆ ಕಳೆದ ಎಂಟು ವರ್ಷಗಳ ಹಿಂದೆ ಕೋಡಿ ಬಿದ್ದಿದ್ದ ಪಕ್ಕುರ್ತಿ ಕೆರೆ ಈ ಬಾರಿ ಮತ್ತೆ ಕೋಡಿ ಬಿದ್ದಿದ್ದು, ಗುಂಡೇರ ಹಳ್ಳದ ಮೂಲಕ ರಾಂಪುರ ಕೆರೆಯತ್ತ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಪಕ್ಕುರ್ತಿ ಕೆರೆಯ ದಡದಲ್ಲಿರುವ ಜಿಲ್ಲಾದಿಗೊಂದಿ ಪ್ರದೇಶದ ಜನರು ತೆಪ್ಪದಲ್ಲಿ ಸಂಚಾರ ಮಾಡದಂತೆ ಜೆ.ಬಿ.ಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸತತ ಎಂಟು ವರ್ಷಗಳಿಂದ ಬತ್ತಿ ಬರಿದಾಗಿದ್ದ ಜಿಲ್ಲೆಯ ಮೊಳಕಾಲ್ಮೂರು ಭಾಗದ ಹಳ್ಳ, ಕೊಳ್ಳ ಸೇರಿದಂತೆ ಕೆರೆಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ತಳವಾರ ಹಳ್ಳಿ ಬಳಿಯ ಸಿದ್ಲಹಳ್ಳ ತುಂಬಿ ಹರಿಯುತ್ತಿದೆ. ಇತ್ತ ಪಕ್ಕುರ್ತಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಎಂಟು ವರ್ಷಗಳ ಬಳಿಕ ಕೆರೆ ಕೋಡಿ ಬಿದ್ದಿರುವುದನ್ನು ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *