ಕೊರೊನಾ ರೋಗವಲ್ಲ, ನಮ್ಮ ತಪ್ಪುಗಳಿಗೆ ಅಲ್ಲಾಹ ನೀಡಿದ ಶಿಕ್ಷೆ: ಸಂಸದ

Public TV
1 Min Read

-ಸಂಸದರ ಹೇಳಿಕೆಯ ವಿಡಿಯೋ ವೈರಲ್

ಲಕ್ನೊ: ಕೊರೊನಾ ಒಂದು ರೋಗವಲ್ಲ. ನಮ್ಮ ತಪ್ಪುಗಳಿಗೆ ಅಲ್ಲಾಹು ನಮ್ಮ ತಪ್ಪುಗಳಿಗೆ ನೀಡಿದ ಶಿಕ್ಷೆ ಎಂದು ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಕ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಅಲ್ಲಾಹು ನೀಡಿರುವ ಈ ಕೊರೊನಾ ಶಿಕ್ಷೆಯಿಂದ ಪಾರಾಗಲು ನಾವು ನಮಾಜ್ ಮಾಡುವ ಮೂಲಕ ಕ್ಷಮೆ ಕೇಳಬೇಕು. ನಮ್ಮನ್ನು ಅಲ್ಲಾಲಹ ಕ್ಷಮಿಸಿದ್ರೆ ನಾವು ಕೊರೊನಾದಿಂದ ಬದುಕುಳಿಯಬಹುದು ಎಂದು ಬರ್ಕ ಹೇಳಿದ್ದರು. ಸಂಸದರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ಜುಲೈ 19ರಂದು ಮಾತನಾಡಿರುವ ಸಂಸದರು, ಬಕ್ರಿದ್ ಹಬ್ಬದ ವೇಳೆ ಮಾರುಕಟ್ಟೆಯನ್ನು ತೆರೆಯಬೇಕು. ಮಾರುಕಟ್ಟೆ ಓಪನ್ ಆದ್ರೆ ಜನರು ಕುರ್ಬಾನಿಗಾಗಿ ಜಾನುವಾರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್‍ನ್ನು ಅಂತ್ಯ ಮಾಡುವದಕ್ಕಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ವಿಡಿಯೋ ವೈರಲ್ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಂಸದರು ತಮ್ಮ ಹೇಳಿಕೆಯನ್ನು ಪುನರುಚ್ಛಿರಿಸಿದ್ದಾರೆ. ಸದ್ಯ ಸರ್ಕಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಹಬ್ಬದ ಪ್ರಯುಕ್ತವಾಗಿ ಸಾಮೂಹಿಕ ನಮಾಜ್ ಗೆ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೇನೆ. ಸರ್ಕಾರ ಸಮ್ಮತಿ ಸೂಚಿಸಿದ್ರೆ ಮಸೀದಿಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಸರ್ಕಾರ ಒಪ್ಪದಿದ್ರೆ ಮನೆಗಳಲ್ಲಿ ನಮಾಜ್ ಮಾಡುತೇವೆ ಎಂದು ಶಫಿಕುರ್ ರಹಮಾನ್ ಬರ್ಕ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *