ಕೊರೊನಾ ನಿಯಂತ್ರಣ ನಮ್ಮ ಕೈ ಮೀರಿ ಹೋಗಿದೆ: ಸಚಿವ ಆನಂದ್ ಸಿಂಗ್

Public TV
1 Min Read

-ನಾನು ಬದುಕುತ್ತೇನೆ ಇಲ್ಲವೋ ಎಂಬ ಭಯ ನನಗೂ ಕಾಡಿತ್ತು

ಬಳ್ಳಾರಿ: ನಾನೂ ಸೇರಿದಂತೆ ನಮ್ಮ ಜಿಲ್ಲೆ, ರಾಜ್ಯ, ದೇಶ ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಮಾಹಾಮಾರಿಯನ್ನು ಕಟ್ಟಿ ಹಾಕುವುದು ಕಷ್ಟ ಸಾದ್ಯ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿಯುತ್ತಿದೆ. ನಿನ್ನೆ ಇದ್ದವರು ಇಂದು ಇಲ್ಲಾ ಎನ್ನುವ ಸನ್ನಿವೇಶ ನಿರ್ಮಾಣವಾಗಿದೆ. Uನಗರ ಪ್ರದೇಶಕ್ಕೆ ಹೋಲಿಕೆ ಮಾಡಿಕೊಂಡ್ರೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹರಡುವಿಕೆ ತೀರಾ ಕಡಿಮೆ. ನಗರ ಪ್ರದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿದೆ. ಈ ರೀತಿಯ ಸಂದರ್ಭದಲ್ಲಿ ಕೊರೊನಾ ಮಹಾಮಾರಿಯನ್ನು ಕಟ್ಟಿ ಹಾಕುವುದು ತೀರಾ ಕಷ್ಟದ ಕೆಲಸ. ಕೊರೊನಾ ನಿಯಂತ್ರಿಸುವಲ್ಲಿ ತಮ್ಮ ಸರ್ಕಾರ ವಿಫಲವಾಗಿದೆ ಎಂಬುದನ್ನು ಸಚಿವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಕೊರೊನಾ ನಿಯಂತ್ರಣದ ನಮ್ಮ ಪ್ರಯತ್ನ ಮಾತ್ರ ನಿರಂತರವಾಗಿ ಇರಲಿದೆ. ಜನರು ಸರ್ಕಾರದ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ತಾವು ಕೊರೊನಾ ಗೆದ್ದು ಬಂದಿರುವುದನ್ನು ತಿಳಿಸಿದರು. ನನಗೂ ಕೊರೊನಾ ಇದೆ ಎಂದು ಗೊತ್ತಾದಾಗ ಬದುಕುತ್ತೇನೆ ಎನ್ನುವ ಅನುಮಾನ ಕಾಡಿತ್ತು, ಆದ್ರೆ ಧೈರ್ಯದಿಂದ ನಾನು ಕೊರೊನಾ ಗೆದ್ದು ಬಂದಿರುವೆ. ಇನ್ನು ನನ್ನ ಬಹುತೇಕ ಸ್ನೇಹಿತರು ನನಗೆ ಕರೆ ಮಾಡಿ ತಮ್ಮ ಅನುಭವ ಹೇಳಿದ್ದಾರೆ. ಎರಡು ದಿನಗಳ ಹಿಂದೆ ನನ್ನ ಸ್ನೇಹಿತ ಸೋಂಕು ತಗುಲಿದ್ದು, ನನನ್ನು ಬದುಕಿಸಿಕೋ ಎಂಥಾ ಅಂಗಲಾಚಿ ಕೇಳಿಕೊಂಡಿದ್ದನು. ಆದರೆ ಅವನ ಅಜಾಗರೂಕತೆಯಿಂದ ಪ್ರಾಣ ಕಳೆದುಕೊಂಡನು. ಜ್ವರ ಕೆಮ್ಮು ಶೀತ ಬಂದರೆ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *