ಕೊರೊನಾ ನಿಯಂತ್ರಣಕ್ಕೆ ಮುಲಾಮು – ಕನ್ನಡಿಗನಿಂದ ಸಂಶೋಧನೆ

Public TV
1 Min Read

ಮುಲಾಮು ದರ ಎಷ್ಟು?

ಬೆಂಗಳೂರು: ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ಹೊಸ ಮುಲಾಮು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಹೆಮ್ಮೆಯ ವಿಷಯ ಅಂದ್ರೆ ಈ ಮುಲಾಮುನ್ನು ಕನ್ನಡಿಗರೊಬ್ಬರು ಸಂಶೋಧನೆ ಮಾಡಿದ್ದಾರೆ.

ಚಿಕ್ಕಮಗಳೂರಿನ ಅಜ್ಜಂಪುರ ಮೂಲದ ನೂತನ್ ಹೆಚ್.ಎಸ್ ಅವರು ಕೊರೊನಾಗೆ ಮುಲಾಮು ಸಂಶೋಧನೆ ಮಾಡಿದ್ದಾರೆ. ಕೋವಿರಕ್ಷಾ ಹೆಸರಿನ ಮುಲಾಮೂನ್ನು ಹಚ್ಚಿಕೊಂಡವರು ಮೂರು ತಾಸು ಕೊರೊನಾ ವೈರಾಣುವಿನಿಂದ ಸುರಕ್ಷಿತವಾಗಿರಬಹುದು ಎಂದು ಸಂಶೋಧನೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಹೊಸ ಅಪಾಯ- ನೀರಿನಲ್ಲಿಯೂ ಪತ್ತೆಯಾದ ಕೊರೊನಾ ವೈರಸ್

ಬೆಂಗಳೂರು ಮೂಲದ ನ್ಯಾನೋ ತಂತ್ರಜ್ಞಾನದ ಸ್ಟಾಟ್ 9 ಆಪ್ ನೂತನ್ ಲ್ಯಾಬ್ಸ್, ಭಾರತೀಯ ವಿಜ್ಞಾನ ಸಂಸ್ಥೆ ಸಹಯೋಗದೊಂದಿಗೆ ಈ ಮುಲಾಮನ್ನು ಸಂಶೋಧನೆ ಮಾಡಲಾಗಿದೆ. ರಾಜ್ಯ ಆಯುಷ್ ಇಲಾಖೆಯಿಂದ ಮುಲಾಮು ಬಳಕೆಗೆ ಅನುಮೋದನೆ ಸಿಕ್ಕಿದ್ದು, ಬೆಳ್ಳಿ ಬಳಸಿಕೊಂಡು, ನ್ಯಾನೋ ಟೆಕ್ನಾಲಜಿ ಮೂಲಕ ಕೋವಿರಕ್ಷಾ ಮುಲಾಮನ್ನು ತಯಾರು ಮಾಡಲಾಗಿದೆ.

ಕಳೆದ ಮೂರು ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ಪ್ರಯೋಗಮಾಡಿ ಯಶಸ್ವಿಯಾಗಿದೆ. ಒಂದು ವಯಲ್ ನ್ನು 200ಕ್ಕೂ ಹೆಚ್ಚು ಬಾರಿ ಬಳಸಬಹುದು. ಮುಖ್ಯವಾಗಿ ಮನೆಯಿಂದ ಹೊರ ಬರುವಾಗ, ಗಂಟಲು, ಮೂಗು, ಕೈ, ಮಾಸ್ಕ್ ಗೆ ಕೋವಿರಕ್ಷಾ ಹಚ್ಚಿಕೊಂಡರೆ, ಮೂರು ಗಂಟೆಗಳ ಕಾಲ ವೈರಾಣುವಿನಿಂದ ರಕ್ಷಣೆ ಪಡೆಯಬಹುದಾಗಿದೆ. ಇದರ ಬೆಲೆ ೩೦೦ ರೂಪಾಯಿಯಾಗಿದ್ದು, ೧೦ ಎಂಎಲ್ ಇರುತ್ತದೆ. ಲಿಕ್ವಿಡ್ ತರಹದ ಮುಲಾಮು ಇದಾಗಿದ್ದು, ಇದರ ರಿಕವರಿ ರೇಟ್ ಕೂಡ ಸ್ಪೀಡಾಗಿದೆ. ಪಾಸಿಟಿವ್ ಬಂದವರು ಇದನ್ನು ಬಳಕೆ ಮಾಡಿದ್ರೆ ೧೪ ದಿನದೊಳಗಡೆಯೇ ನೆಗಟಿವ್ ಬರುತ್ತದೆ ಎಂದು ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ರೂವ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *