ಮೈಸೂರು: 98 ವರ್ಷದ ವೃದ್ಧರೊಬ್ಬರು ಕೊರೊನಾ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ನಗರದ ವಿದ್ಯಾರಣ್ಯಪುರಂ ನಿವಾಸಿ ಸೂರ್ಯನಾರಾಯಣ್ (98) ಕೊರೊನಾ ಗೆದ್ದ ವೃದ್ಧ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಇಂದು ಮನೆಗೆ ಬಂದಿದ್ದಾರೆ. ಈ ವೇಳೆ ವೃದ್ಧಗೆ ಪುಷ್ಪಾರ್ಚನೆ ಮೂಲಕ ಕುಟುಂಬಸ್ಥರು ಸ್ವಾಗತ ಕೋರಿದರು.
ಕೊರೊನಾದಿಂದ ಆಗಮಿಸಿದ ವೃದ್ಧನನ್ನು ಕುಟುಂಬಸ್ಥರ ಜೊತೆ ನಗರ ಪಾಲಿಕೆ ಸದಸ್ಯೆ ಶೋಭಾ ಸುನಿಲ್ ಕೂಡ ಸ್ವಾಗತಿಸಿ, ಕೊರೊನಾ ಸೋಂಕು ತಗುಲಿದವರನ್ನು ಮಾನವೀಯತೆ ದೃಷ್ಠಿಯಿಂದ ನೋಡಬೇಕು. ಗುಣಮುಖರಾದ ಬಳಿಕ ಅವರನ್ನು ದೂರ ಮಾಡುವುದು ಬೇಡ. ಈ ಹಿನ್ನಲೆಯಲ್ಲಿ ಅವರಿಗೆ ಸ್ವಾಗತ ಕೋರಿದ್ದೇವೆಂದ ತಿಳಿಸಿದರು.