ಕೊರೊನಾ ಗೆದ್ದ ಬೆಳ್ತಂಗಡಿ ಬಂಗಾಡಿಯ 13 ಮಂದಿಯ ತುಂಬು ಕುಟುಂಬ

Public TV
1 Min Read

ಮಂಗಳೂರು: ಕೊರೊನಾ ಮಹಾಮಾರಿ ಎಲ್ಲೆಡೆ ಜನರನ್ನು ತತ್ತರಿಸುವಂತೆ ಮಾಡಿದ್ದು ಹೆಚ್ಚಿನವರು ಹೆದರಿಯೇ ಸಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಹೆದರುವ ಜನರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ 13 ಮಂದಿಯ ಕುಟುಂಬವೊಂದು ಕೊರೊನಾ ಗೆದ್ದು ಬಂದಿದೆ.

ಬೆಳ್ತಂಗಡಿಯ ಬಂಗಾಡಿ ಗ್ರಾಮದ ಶಿವಪ್ಪ ಪೈ ಕುಟುಂಬದ ಹಸುಗೂಸಿನಿಂದ ಹಿಡಿದು ವೃದ್ಧರ ತನಕ ಎಲ್ಲರೂ ಕೊರೊನಾ ವಿನ್ನರ್ ಆಗಿದ್ದಾರೆ. ಮುಂಬೈನಿಂದ ಬಂದ ಸಂಬಂಧಿಕರಿಂದ ಈ ಕುಟುಂಬದ 13 ಮಂದಿಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇದರಲ್ಲಿ 4 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ 9 ಮಂದಿ ಮನೆಯಲ್ಲೇ ಐಸೋಲೇಷನ್ ನಲ್ಲಿದ್ದರು.

9 ಮಂದಿಯೂ ಮನೆಯಲ್ಲೇ ಪ್ರತ್ಯೇಕ ಪ್ರತ್ಯೇಕವಿದ್ದು, ವೈದ್ಯರ ಸಲಹೆಯ ಜೊತೆಗೆ ಮನೆ ಮದ್ದು ತೆಗೆದುಕೊಂಡಿದ್ದರು. ಹೀಗಾಗಿ ಹಸುಗೂಸಿನಿಂದ ಹಿಡಿದು ಮುದಕರವರೆಗಿನ ಎಲ್ಲಾ 13 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *