ಕೊರೊನಾದಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ 15 ಸಾವಿರ: ಆಂಧ್ರ ಸರ್ಕಾರ

Public TV
1 Min Read

ಹೈದರಾಬಾದ್: ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ 15 ಸಾವಿರ ರೂ. ನೀಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಕೊರೊನಾಗೆ ಬಲಿಯಾದ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡುವವರಿಗೆ ಈ ಧನಸಹಾಯ ಸಿಗಲಿದೆ. ಕೊರೊನಾಗೆ ಬಲಿಯಾದ ರೋಗಿಯ ಅಂತ್ಯಕ್ರಿಯೆ ಮಾಡುವ ಕುಟುಂಬ ಅಥವಾ ಪುರಸಭೆ ಸಿಬ್ಬಂದಿ ಅಥವಾ ಪಂಚಾಯ್ತಿ ಮಟ್ಟದ ಅಧಿಕಾರಿಗಳಿಗೆ ಸರ್ಕಾರದಿಂದ 15 ಸಾವಿರ ರೂ. ಸಿಗಲಿದೆ.

ಕೊರೊನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆಯನ್ನು ಅಮಾನವೀಯ ಮಾಡಲಾಗಿತ್ತು. ಆಂಧ್ರ ಪ್ರದೇಶದಲ್ಲಿ ಎರಡ್ಮೂರು ಪ್ರಕರಣಗಳ ವರದಿ ಆಗಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಪಕ್ಷ ಟಿಡಿಪಿ ಸಹ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿತ್ತು. ಈ ಹಿನ್ನೆಲೆ ಸಿಎಂ ಜಗನ್ ಮೋಹನ್ ರೆಡ್ಡಿ, ಕೊರೊನಾದಿಂದ ಮೃತರ ಅಂತ್ಯಕ್ರಿಯೆಗೆ 15 ಸಾವಿರ ಧನ ಸಹಾಯ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *