ಕೊರೊನಾಗೆ ಹೂವು ಬೆಳೆಗಾರರು ಕಂಗಾಲು – ಬೆಳೆ ನಾಶ ಮಾಡಿದ ರೈತ

Public TV
1 Min Read

ಹಾವೇರಿ: ಕೊರೊನಾ ಅರ್ಭಟದಿಂದ ರಾಜ್ಯದ ಅನ್ನದಾತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾವೇರಿ ತಾಲ್ಲೂಕು ನಾಗನೂರು ಗ್ರಾಮದ ರೈತನೋರ್ವ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಸೇವಂತಿಗೆ ಹೂವಿನ ಬೆಳೆ ನಾಶ ಮಾಡಿದ್ದಾರೆ.

ನಾಗನೂರು ಗ್ರಾಮದ ರೈತ ಹೋಳಿಯಪ್ಪ ಸಂಗಾಪುರ ಎಂಬುವರು ಒಂದು ಎರಕೆಯಲ್ಲಿ ಸೇವಂತಿಗೆ ಹೂವು ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ, ಕಡಿಮೆ ದರ ಕೇಳುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ಸೇವಂತಿಗೆ ಹೂವಿನ ಬೆಳೆಯನ್ನ ಸಂಪೂರ್ಣವಾಗಿ ನಾಶ ಮಾಡಿದ್ದಾರೆ.

ಸುಮಾರು 20 ರಿಂದ 30 ಸಾವಿರ ಖರ್ಚು ಮಾಡಿ ಸೇವಂತಿಗೆ ಹೂವು ಬೆಳೆದಿದ್ದರು. ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗುತ್ತಿಲ್ಲ. ಕಡಿಮೆ ಬೆಲೆ ಕೇಳುತ್ತಿದ್ದಾರೆ. ಕೆಲವು ಭಾರಿ ಸರಿಯಾದ ಬೆಲೆ ಸಿಗದೆ ಸೇವಂತಿಗೆ ಹೂವುವನ್ನು ಮಾರುಕಟ್ಟೆಯಲ್ಲಿ ಸುರಿದು ಬಂದಿದ್ದೇನೆ. ಅದಕ್ಕೆ ಟ್ಯಾಕ್ಟರ್ ನಿಂದ ರೂಟರ್ ಹೊಡೆದು ಬೆಳೆ ನಾಶ ಮಾಡುತ್ತಿದ್ದೇನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *