ಕೊಪ್ಪಳದಲ್ಲಿ ಸೋಮವಾರದಿಂದ 5 ದಿನ ಲಾಕ್‍ಡೌನ್: ಪರಣ್ಣ ಮುನವಳ್ಳಿ

Public TV
1 Min Read

ಕೊಪ್ಪಳ: ಜಿಲ್ಲೆಯಲ್ಲಿ ಮತ್ತೆ ಸೋಮವಾರದಿಂದ ಐದು ದಿನ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ದಿನಗಳ ಕಾಲ ಲಾಕ್ ಡೌನ್‍ಗೆ ಇಂದು ಕೊನೆಯ ದಿನವಾಗಿದೆ. ನಾಳೆ, ನಾಡಿದ್ದು ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂದರು.

ಶನಿವಾರ, ರವಿವಾರ ಅಗತ್ಯ ವಸ್ತು, ತರಕಾರಿ ಖರೀದಿಗೆ ಅವಕಾಶ ನೀಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಶಾಸಕರು ಚರ್ಚೆ ಮಾಡಿದ್ದೇವೆ. ಎರಡು ದಿನ ಖರೀದಿಗೆ ಅವಕಾಶವಿದೆ ಎಂದು ತಿಳಿಸಿದರು.

ಯಾರೂ ಅನಗತ್ಯವಾಗಿ ಹೊರಗಡೆ ಬರಬೇಡಿ ಎಂದು ಇದೇ ವೇಳೆ ಮನವಿ ಮಾಡಿಕೊಂಡ ಶಾಸಕರು, ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗ್ತಿದೆ. ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಇದು ಆತಂಕಕಾರಿ ವಿಷಯ. ಎಲ್ಲರೂ ನಾಳೆ ನಾಡಿದ್ದು ಖರೀದಿ ಮಾಡ್ರೀ, ಮತ್ತೆ ಐದು ದಿನ ಹೊರಗಡೆ ಬರಬೇಡಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *